alex Certify BIG NEWS: ರಾಜ್ಯಾದ್ಯಂತ ನಡೆದ ಜನತಾದರ್ಶನದಲ್ಲಿ 12,914 ಅಹವಾಲು ಸ್ವೀಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯಾದ್ಯಂತ ನಡೆದ ಜನತಾದರ್ಶನದಲ್ಲಿ 12,914 ಅಹವಾಲು ಸ್ವೀಕಾರ

ಬೆಂಗಳೂರು: ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಏಕಕಾಲದಲ್ಲಿ ನಡೆದ ಜನತಾದರ್ಶನದಲ್ಲಿ 12,914 ಅಹವಾಲು ಸ್ವೀಕರಿಸಲಾಗಿದೆ.

ಆಯಾ ಇಲಾಖೆಯ ಅಹವಾಲುಗಳನ್ನು ಕೂಡಲೇ ಬಗೆಹರಿಸಲು ಇಲಾಖೆ ಮುಖ್ಯಸ್ಥರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಪತ್ರ ಬರೆದಿದ್ದಾರೆ.

ಸ್ವೀಕರಿಸಲಾದ ಅಹವಾಲುಗಳಲ್ಲಿ ಈಗಾಗಲೇ 180 ಸಮಸ್ಯೆ ಇತ್ಯರ್ಥಪಡಿಸಲಾಗಿದೆ. ಸೆ. 25ರಂದು ಜನತಾದರ್ಶನ ನಡೆದಿದ್ದು, ಗದಗ, ಬೆಳಗಾವಿ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 6684 ಅಹವಾಲು ಸಲ್ಲಿಕೆಯಾಗಿರುವುದಾಗಿ ಸರ್ಕಾರ ಹೇಳಿತ್ತು.

ಮರುದಿನ ಬೆಳಗಾವಿ ಜಿಲ್ಲೆಯಲ್ಲಿ ಜನತಾದರ್ಶನ ನಡೆಸಲಾಗಿದ್ದು, 12,914 ಅಹವಾಲು ಸಲ್ಲಿಕೆಯಾಗಿವೆ. 180 ಅಹವಾಲುಗಳನ್ನು ಇತ್ಯರ್ಥಪಡಿಸಲಾಗಿದ್ದು, ಉಳಿದವುಗಳನ್ನು ಬಗೆಹರಿಸಿ ಪರಿಹಾರ ಕಲ್ಪಿಸಲು ಮತ್ತು ಈ ಕುರಿತಾಗಿ ಸಿಎಂ ಕಚೇರಿಗೆ ವರದಿ ನೀಡಲು ಪತ್ರ ಬರೆದು ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...