alex Certify ಧಗಧಗ ಹೊತ್ತಿ ಉರಿದ ಗುಡಿಸಲು : ಮನೆ ಕಟ್ಟಲು ತಂದಿಟ್ಟಿದ್ದ 1 ಲಕ್ಷ ಹಣ, ಚಿನ್ನಾಭರಣ ಸುಟ್ಟು ಭಸ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಗಧಗ ಹೊತ್ತಿ ಉರಿದ ಗುಡಿಸಲು : ಮನೆ ಕಟ್ಟಲು ತಂದಿಟ್ಟಿದ್ದ 1 ಲಕ್ಷ ಹಣ, ಚಿನ್ನಾಭರಣ ಸುಟ್ಟು ಭಸ್ಮ

ತುಮಕೂರು : ಗುಡಿಸಲಿಗೆ ಬೆಂಕಿ ತಗಲಿ ಗುಡಿಸಲು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದ ಮುಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಜಣ್ಣ ಎಂಬುವವರಿಗೆ ಸೇರಿದ್ದ ಗುಡಿಸಲಿಗೆ ಬೆಂಕಿ ತಗುಲಿದ್ದು, ಮನೆ ಕಟ್ಟಲೆಂದು ಕೂಡಿಟ್ಟ 1 ಲಕ್ಷ ಹಣ ಹಾಗೂ 3 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಸುಟ್ಟು ಹೋಗಿದೆ. ಹೊಸದಾಗಿ ಮನೆ ಕಟ್ಟಿಸುತ್ತಿದ್ದರಿಂದ ರಾಜಣ್ಣ ಕುಟುಂಬ ಪಕ್ಕದ ಗುಡಿಸಲಿನಲ್ಲಿ ವಾಸವಾಗಿತ್ತು, ಬೆಂಕಿ ದುರಂತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ . ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...