alex Certify ದೇಗುಲಕ್ಕೆ ಪೂಜೆಗೆ ಬಂದು ಬೆಚ್ಚಿಬಿದ್ದ ಅರ್ಚಕ: ದೇವಿ ಬುಡದಲ್ಲಿ ಕತ್ತರಿಸಿದ ರುಂಡ ಪತ್ತೆ, ಮುಂಡಕ್ಕಾಗಿ ಮುಂದುವರೆದ ಹುಡುಕಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಗುಲಕ್ಕೆ ಪೂಜೆಗೆ ಬಂದು ಬೆಚ್ಚಿಬಿದ್ದ ಅರ್ಚಕ: ದೇವಿ ಬುಡದಲ್ಲಿ ಕತ್ತರಿಸಿದ ರುಂಡ ಪತ್ತೆ, ಮುಂಡಕ್ಕಾಗಿ ಮುಂದುವರೆದ ಹುಡುಕಾಟ

ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪೂಜಾ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಶಿರಚ್ಛೇದಿತ ತಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಚಿಂತಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಧಾರ್ಮಿಕ ಸ್ಥಳದಲ್ಲಿದ್ದ ಮಹಾಂಕಾಳಿ ಮೂರ್ತಿಯ ಪಾದದ ಮೇಲೆ ತಲೆ ಬಿದ್ದಿರುವುದನ್ನು ಗಮನಿಸಿದ ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ದೇವಸ್ಥಾನದಲ್ಲಿ ಕೃತ್ಯ ನಡೆದಿಲ್ಲದ ಕಾರಣ ಕೊಲೆ ನರಬಲಿಯಾಗಿರಲಾರದೆಂದು ಹೇಳಲಾಗಿದೆ. ಪ್ರಕರಣದ ತನಿಖೆಗೆ 8 ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಇದುವರೆಗೆ ದೇಹದ ಉಳಿದ ಭಾಗ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿ 25 ರಿಂದ 35 ವರ್ಷ ವಯಸ್ಸಿನವನಾಗಿದ್ದು, ಆತನನ್ನು ಬೇರೆ ಸ್ಥಳದಲ್ಲಿ ಕೊಂದು ತಲೆಯನ್ನು ಬಿಸಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತನ ತಲೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಂತರ, ಸೂರ್ಯಪೇಟೆಯ ಕುಟುಂಬವೊಂದು ವ್ಯಕ್ತಿಯನ್ನು ಗುರುತಿಸಿದೆ.

ಕುಟುಂಬವು ನಲ್ಗೊಂಡಕ್ಕೆ ಆಗಮಿಸಿದ್ದು, ಬಲಿಪಶುವನ್ನು 30 ವರ್ಷದ ರಮಾವತ್ ಜೈಹಿಂದ್ ಎಂದು ಗುರುತಿಸಲಾಗಿದೆ ಎಂದು ದೇವರಕೊಂಡ ಡಿಎಸ್ಪಿ(ಉಪ ಪೊಲೀಸ್ ವರಿಷ್ಠಾಧಿಕಾರಿ) ಆನಂದ್ ರೆಡ್ಡಿ ತಿಳಿಸಿದರು. ಈ ವ್ಯಕ್ತಿ ನಾಲ್ಕೈದು ವರ್ಷಗಳ ಹಿಂದೆ ತನ್ನ ಮನೆಯನ್ನು ತೊರೆದು ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದ್ದ ಎಂದು ಅವರು ತಿಳಿಸಿದ್ದಾರೆ. ಇಲ್ಲಿಯವರೆಗೆ, ತಲೆ ಮಾತ್ರ ಪತ್ತೆಯಾಗಿದೆ, ಉಳಿದ ಭಾಗಗಳು ಇನ್ನೂ ಪತ್ತೆಯಾಗಿಲ್ಲ ಎಂದು ಡಿಎಸ್ಪಿ ಹೇಳಿದರು. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅವರು ಹೇಳಿದರು. ಈ ದೇವಾಲಯವು ಹೈದರಾಬಾದ್‌ನಿಂದ ನಾಗಾರ್ಜುನ ಸಾಗರ್‌ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಸಮೀಪದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...