alex Certify ಈ ರಾಶಿಯವರಿಗೆ ಇಂದು ಕಾದಿದೆ ಉದ್ಯಮದಲ್ಲಿ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಕಾದಿದೆ ಉದ್ಯಮದಲ್ಲಿ ಲಾಭ

ಮೇಷ : ಚಿಕ್ಕ ಚಿಕ್ಕ ವಿಷಯಗಳೂ ನಿಮ್ಮ ಅಸಮಾಧಾನಕ್ಕೆ ಕಾರಣವಾಗಲಿದೆ. ಸಂಪಾದಿಸಿದ ಹಣವು ನಿಮ್ಮ ಕೈನಿಂದ ಜಾರಿಹೋಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕುಲದೇವತೆಯ ಅನುಗ್ರಹ ನಿಮ್ಮ ಮೇಲಿದೆ.

ವೃಷಭ : ಅತಿಯಾದ ಕೆಲಸದ ಒತ್ತಡದಿಂದ ನೀವಿಂದು ತುಂಬಾನೆ ದಣಿಯಲಿದ್ದೀರಿ. ಬೆನ್ನು ನೋವಿನ ಸಮಸ್ಯೆಯು ನಿಮ್ಮನ್ನು ಭಾದಿಸಲಿದೆ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡುವ ಸಾಧ್ಯತೆ ಇದೆ.

ಧಾರ್ಮಿಕ ಕಾರ್ಯಗಳನ್ನ ನೆರವೇರಿಸುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಲಿದ್ದೀರಿ.

ಮಿಥುನ : ದೀರ್ಘ ಕಾಲದಿಂದ ತೀರಿಸಬೇಕಿದ್ದ ಹರಕೆಯನ್ನ ಪೂರ್ಣಗೊಳಿಸುವ ಕಾರ್ಯ ಸನ್ನಿಹಿತವಾಗಲಿದೆ. ಸಂಗಾತಿಯಿಂದ ರುಚಿಕರ ಖಾದ್ಯವನ್ನ ಸೇವಿಸುತ್ತೀರಿ. ಮನೆಯಲ್ಲಿ ಸಂತಸ ವಾತಾವರಣ ನಿರ್ಮಾಣವಾಗಲಿದೆ. ಈ ದಿನವನ್ನ ನೀವು ಖುಷಿಯಿಂದ ಕಳೆಯಲಿದ್ದೀರಿ.

ಕಟಕ : ಪ್ರಭಾವಿ ವ್ಯಕ್ತಿಗಳ ಬೆಂಬಲ ಇರೋದ್ರಿಂದ ನೀವು ಸಾಹಸಮಯ ಕೆಲಸಗಳಿಗೆ ಕೈ ಹಾಕಲಿದ್ದೀರಿ. ಸಹೋದ್ಯೋಗಿಗಳ ವರ್ತನೆ ನಿಮಗೆ ಕಿರಿಕಿರಿ ಉಂಟು ಮಾಡಲಿದೆ. ಸುಸ್ಥಿರ ಆರೋಗ್ಯ ಕಾಪಾಡಲು ದೇಹದಂಡನೆ ಮಾಡಿ.

ಸಿಂಹ : ಮನೆ ಬಳಕೆ ವಸ್ತು ಖರೀದಿಗಾಗಿ ಹಣವ್ಯಯ ಮಾಡಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಸೂಚನೆ ಸಿಗಲಿದೆ. ಸಂಗಾತಿಯಿಂದ ಅಸಡ್ಡೆಗೆ ಒಳಗಾಗಲಿದ್ದೀರಿ. ಇದರಿಂದ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗಲಿದೆ.

ಕನ್ಯಾ : ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಎಲ್ಲಾ ನೋವುಗಳನ್ನ ನೀವೊಂದೆ ನುಂಗಿಕೊಳ್ಳಲು ಹೋಗಬೇಡಿ. ಆತ್ಮೀಯರೊಂದಿಗೆ ಹಂಚಿಕೊಳ್ಳಿ. ನಿಮಗೂ ನಿರಾಳ ಎನಿಸಲಿದೆ. ಸಂಗಾತಿಯಿಂದ ಶುಭ ಸುದ್ದಿ ಕೇಳಲಿದ್ದೀರಿ.

ತುಲಾ : ಚಿಕ್ಕ ಚಿಕ್ಕ ವಿಚಾರಗಳಿಗೆ ಬೇಸರ ಮಾಡಿಕೊಳ್ಳುವ ಅಭ್ಯಾಸವನ್ನ ನೀವು ಕೈಬಿಡಬೇಕಿದೆ. ಸಂಗಾತಿಯ ಮೇಲೆ ಒತ್ತಡ ಹೇರಬೇಡಿ. ವೃತ್ತಿ ರಂಗದಲ್ಲಿ ಉತ್ತಮ ವ್ಯಕ್ತಿ ಎಂದು ಕರೆಸಿಕೊಳ್ಳುವ ನೀವು ಕುಟುಂಬಸ್ಥರನ್ನ ಖುಷಿಯಾಗಿಡುವಲ್ಲಿ ಪದೇ ಪದೇ ಎಡವುತ್ತೀರಿ.

ವೃಶ್ಚಿಕ : ಹಿರಿಯರ ಸಲಹೆ ಪಡೆದೇ ಹಣ ಹೂಡಿಕೆ ಮಾಡಿದ ಪರಿಣಾಮ ಇಂದು ನಷ್ಟ ಅನುಭವಿಸುತ್ತೀರಿ. ನಷ್ಟದ ಜೊತೆಗೆ ಖರ್ಚಿನ ಹೊರೆಯೂ ಹೆಚ್ಚಾಗೋದ್ರಿಂದ ಮಾನಸಿಕ ಶಾಂತಿ ಕೆಡಲಿದೆ. ದಾಂಪತ್ಯ ಜೀವನದಲ್ಲಿ ಅನಗತ್ಯ ವಾದ ಬೇಡ.

ಧನು : ಕೆಲವೊಂದು ವಾದಗಳಿಗೆ ಪ್ರತಿವಾದದ ಅವಶ್ಯಕತೆ ಇರೋದಿಲ್ಲ. ಸುಮ್ಮನೆ ನಕ್ಕುಬಿಡಿ. ಯೋಚನೆ ಮಾಡದೇ ಯಾರಿಗೂ ಪ್ರಮಾಣ ಮಾಡಬೇಡಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಕ್ಕಳಿಂದ ಶುಭ ವಾರ್ತೆ ಕೇಳಲಿದ್ದೀರಿ.

ಮಕರ : ವಾಹನ ಸಂಚಾರ ಮಾಡುವಾಗ ಎಚ್ಚರಿಕೆ ವಹಿಸಿ. ಆದಷ್ಟು ದೂರ ಪ್ರಯಾಣಗಳನ್ನ ಮಾಡಲೇಬೇಡಿ. ಇತರರಿಗೆ ಸಹಾಯ ಮಾಡುವ ನಿಮ್ಮ ಗುಣ ಸಾರ್ವಜನಿಕ ಜೀವನದಲ್ಲಿ ಪ್ರಶಂಸೆಗೊಳಪಡಲಿದೆ.

ಕುಂಭ : ಈ ಹಿಂದೆ ಕೈಗೊಂಡಿದ್ದ ಒಂದು ಕೆಟ್ಟ ನಿರ್ಧಾರಕ್ಕೆ ಇಂದು ಪಶ್ಚಾತಾಪ ಪಡುತ್ತೀರಾ. ಈ ಇಕ್ಕಟ್ಟಿನಿಂದ ಹೊರ ಬರಲು ಸ್ನೇಹಿತರಿಂದ ಸಲಹೆ ಸ್ವೀಕರಿಸಿ. ಖರ್ಚು ವೆಚ್ಚ ಮಾಡುವಾಗ ಪ್ರಜ್ಞೆ ಇರಲಿ.

ಮೀನ : ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಉದ್ಯೋಗಕ್ಕಾಗಿ ಅರಸುತ್ತಿರುವವರು ಮತ್ತೆ ಪ್ರಯತ್ನ ಮುಂದುವರಿಸಿ. ಉದ್ಯಮಿಗಳಿಗೆ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...