alex Certify ಪ್ರಾಂಶುಪಾಲರ ಹುದ್ದೆಗಾಗಿ ಪೈಪೋಟಿ, ಶಿಕ್ಷಣ ಇಲಾಖೆ ಕಚೇರಿಯಲ್ಲೇ ಹೊಡೆದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಂಶುಪಾಲರ ಹುದ್ದೆಗಾಗಿ ಪೈಪೋಟಿ, ಶಿಕ್ಷಣ ಇಲಾಖೆ ಕಚೇರಿಯಲ್ಲೇ ಹೊಡೆದಾಟ

ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಶಾಲೆಯೊಂದರ ಪ್ರಾಂಶುಪಾಲರಾಗಲು ಹೊಡೆದಾಟವೇ ನಡೆದಿದೆ.

ಶಿವಶಂಕರ್ ಗಿರಿ ಮತ್ತು ರಿಂಕಿ ಕುಮಾರಿ ಅವರು ಬಿಹಾರ ರಾಜ್ಯದ ಅಡಾಪುರ ಪ್ರದೇಶದ ಪ್ರಾಥಮಿಕ ಶಾಲೆಯಲ್ಲಿ ಪ್ರಿನ್ಸಿಪಾಲ್ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಸುಮಾರು ಮೂರು ತಿಂಗಳಿನಿಂದ ಇಬ್ಬರೂ ಜಗಳವಾಡುತ್ತಿದ್ದರು. ಯಾರು ವೃತ್ತಿಪರ ಜೇಷ್ಠತೆಯನ್ನು ಹೊಂದಿದ್ದಾರೆ ಮತ್ತು ಪ್ರಾಂಶುಪಾಲರ ಸ್ಥಾನಕ್ಕೆ ಹೆಚ್ಚು ಅರ್ಹತೆ ಹೊಂದಿದ್ದಾರೆ ಎಂಬ ವಿಷಯದ ಬಗ್ಗೆ ಅವರ ನಡುವೆ ವಾಗ್ವಾದ ಜಗಳ ನಡೆದಿದೆ.

ಶಿವಶಂಕರ್ ಗಿರಿ ಮತ್ತು ರಿಂಕಿ ಕುಮಾರಿ ನಡುವಿನ ಸ್ಪರ್ಧೆಯ ದುರದೃಷ್ಟಕರ ಫಲಿತಾಂಶವು ದೈಹಿಕ ಹಲ್ಲೆಯ ಮಟ್ಟಕ್ಕೆ ಬಂದಿದೆ. ಅವರ ಶಿಕ್ಷಣ ಮತ್ತು ಇತರ ದಾಖಲೆಗಳನ್ನು ಸಲ್ಲಿಸುವಂತೆ ಜಿಲ್ಲಾ ಶಿಕ್ಷಣ ಇಲಾಖೆಯು ಕೇಳಿಕೊಂಡ ನಂತರ ಇದು ಸ್ಫೋಟಗೊಂಡಿದೆ.

ಮೋತಿಹರಿಯಲ್ಲಿರುವ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಯಾರು ಮೊದಲು ದಾಖಲೆಗಳನ್ನು ನೀಡುತ್ತಾರೆ ಎಂಬುದರ ಕುರಿತಾಗಿ ಇಬ್ಬರು ಶಿಕ್ಷಕರು ಜಗಳವಾಡಿದ್ದಾರೆ.

ಕೋಪಗೊಂಡ ರಿಂಕಿ ಕುಮಾರಿಯ ಪತಿ ಶಿವಶಂಕರ್ ಗಿರಿ ಅವರನ್ನು ಹೊಡೆದು ಮುಷ್ಟಿಯಿಂದ ಗುದ್ದಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ನಂತರ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...