alex Certify ನಾಗಚೈತನ್ಯ – ಸಮಂತಾ ವಿಚ್ಛೇದನದ ಹಿಂದಿನ ಗುಟ್ಟು ಬಿಚ್ಚಿಟ್ಟ ಕಂಗನಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗಚೈತನ್ಯ – ಸಮಂತಾ ವಿಚ್ಛೇದನದ ಹಿಂದಿನ ಗುಟ್ಟು ಬಿಚ್ಚಿಟ್ಟ ಕಂಗನಾ….!

ಸೆಲೆಬ್ರಿಟಿಗಳಾದವರಿಗೆ ಒಂದೆಡೆ ಹೆಸರು-ಖ್ಯಾತಿ ಹಾಗು ದುಡ್ಡಿನ ಮೇಲೆ ತೇಲಾಡುವ ಖುಷಿಯಾದರೆ ಮತ್ತೊಂದೆಡೆ ತಮ್ಮ ಜೀವನದ ಸೂಕ್ಷ್ಮವಾದ ಗುಟ್ಟುಗಳೆಲ್ಲವೂ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುವ ಫಜೀತಿಗಳನ್ನು ಅರಗಿಸಿಕೊಳ್ಳಬೇಕಾದ ಅನಿವಾರ್ಯತೆ.

ಟಾಲಿವುಡ್‌ನ ಹಾಟ್‌ಫೇವರಿಟ್ ತಾರಾ ದಂಪತಿ ಸಮಂತಾ ರುತ್‌ ಪ್ರಭು ಹಾಗೂ ಅಕ್ಕಿನೇನಿ ನಾಗಚೈತನ್ಯರ ನಡುವೆ ವಿಸವೇರ್ಪಟ್ಟಿದ್ದು, ಇಬ್ಬರೂ ವಿಚ್ಛೇದನಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಬಹಳ ದಿನಗಳಿಂದ ಹರಿದಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.

ಇದೀಗ ಈ ಸುದ್ದಿ ಬಾಲಿವುಡ್‌ ಅಂಗಳದಲ್ಲೂ ಸದ್ದು ಮಾಡುತ್ತಿದ್ದು, ಟಾಲಿವುಡ್‌ನ ತಾರಾ ದಂಪತಿಗಳ ಬಗ್ಗೆ ಕಾಮೆಂಟ್ ಮಾಡಲು ಕಂಗನಾ ರಣಾವತ್ ಮುಂದಾಗಿದ್ದಾರೆ.

ಇನ್‌ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಂಗನಾ, “ವಿಚ್ಛೇದನವಾದಾಗಲೆಲ್ಲಾ ಅದು ಪುರುಷನದ್ದೇ ತಪ್ಪಾಗುತ್ತದೆ… ಇದು ತೀರಾ ಬಾಲಿಶ ಎನಿಸಬಹುದು ಆದರೆ ದೇವರು ಪುರುಷ ಹಾಗೂ ಮಹಿಳೆಯರನ್ನು ಆ ರೀತಿಯ ಸ್ವಭಾವ ಹಾಗೂ ಪ್ರಕೃತಿಯಲ್ಲಿ ಸೃಷ್ಟಿಸಿದ್ದಾನೆ…

ಮಮತಾ ಬ್ಯಾನರ್ಜಿಗೆ ಭರ್ಜರಿ ಮುನ್ನಡೆ, ಗೆಲುವು ಖಚಿತವಾಗ್ತಿದ್ದಂತೆ ಮುಗಿಲು ಮುಟ್ಟಿದ ಸಂಭ್ರಮಾಚರಣೆ

ಮೂಲಭೂತವಾಗಿ ಪುರುಷ ಬೇಟೆಗಾರನಾದರೆ ಮಹಿಳೆ ಪೋಷಕಿಯಾಗಿದ್ದಾಳೆ. ಮಹಿಳೆಯರನ್ನು ಬಟ್ಟೆಯಂತೆ ಬದಲಿಸಿ ಅವರು ತಮ್ಮ ಬೆಸ್ಟ್ ಫ್ರೆಂಡ್‌ಗಳು ಅಷ್ಟೇ ಎನ್ನುವ ಈ ಮಂದಿಯ ಬಗ್ಗೆ ಚಿಂತಿಸುವುದನ್ನು ಬಿಟ್ಟುಬಿಡಿ. ಹೌದು, ನೂರರಲ್ಲಿ ಒಬ್ಬ ಮಹಿಳೆ ತಪ್ಪು ಮಾಡಬಹುದು, ಇದೇ ಆ ಅನುಪಾತ,” ಎಂದಿದ್ದಾರೆ.

“ಮಾಧ್ಯಮಗಳು ಹಾಗೂ ಅಭಿಮಾನಿಗಳಿಂದ ಪ್ರೇರಣೆ ಪಡೆಯುವ ಇಂಥ ಕೆಟ್ಟ ಮಂದಿಗೆ ನಾಚಿಕೆಯಾಗಬೇಕು. ಅವರು ಮಹಿಳೆಯರನ್ನು ಜಡ್ಜ್‌ ಮಾಡುತ್ತಾರೆ. ವಿಚ್ಛೇದನದ ಸಂಸ್ಕೃತಿ ಹಿಂದೆಂದಿಗಿಂತಲೂ ಜೋರಾಗಿದೆ,” ಎಂದ ತಲೈವಿ ನಟಿ, ನಾಗ ಚೈತನ್ಯ ಹಾಗೂ ಆಮೀರ್‌ ಖಾನ್‌ರ ಪರೋಕ್ಷ ಉಲ್ಲೇಖ ಮಾಡುವ ಮೂಲಕ ಬೆಂಕಿ ಹೊತ್ತಿಸುವ ಕಾಮೆಂಟ್ ಒಂದನ್ನು ಮಾಡಿದ್ದಾರೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಐರಾವನ್’ ಸಿನಿಮಾ

“ದಕ್ಷಿಣದ ಈ ನಟ ತನ್ನ ಪತ್ನಿಯೊಂದಿಗೆ 4 ವರ್ಷಗಳ ಕಾಲ ಸಂಸಾರ ಮಾಡಿ, ಅದಕ್ಕೂ ಮುನ್ನ ದಶಕಕ್ಕೂ ಹೆಚ್ಚು ಕಾಲ ಪ್ರೇಮಪಾಶದಲ್ಲಿದ್ದು, ದಿಢೀರ್‌ ಎಂದು ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಬಾಲಿವುಡ್‌ ಡೈವೋರ್ಸ್ ತಜ್ಞ ಎಂದೇ ಹೆಸರಾದ ಬಾಲಿವುಡ್ ಸೂಪರ್‌ಸ್ಟಾರ್‌ ಒಬ್ಬರೊಂದಿಗೆ ಇತ್ತೀಚೆಗೆ ಸಂಪರ್ಕಕ್ಕೆ ಬಂದಿದ್ದಾನೆ,” ಎಂದು ಕಂಗನಾ ಹೇಳಿಕೊಂಡಿದ್ದಾರೆ.

17 ಕೋಟಿ ರೂ.ಲಾಟರಿ ಗೆದ್ದರೂ ಈಕೆ ಬದುಕುತ್ತಿರುವ ರೀತಿ ಎಲ್ಲರಿಗೂ ಮಾದರಿ

ಬಹಳ ಮಂದಿ ಸ್ತ್ರೀಯರು ಹಾಗೂ ಮಕ್ಕಳ ಜೀವನ ಹಾಳು ಮಾಡಿದ್ದಾರೆ ಎಂದು ಅಮೀರ್‌ ವಿರುದ್ಧ ಕಿಡಿಯಾಡಿದ ಕಂಗನಾ, “ಆತ ಬಹಳ ಮಹಿಳೆಯರು ಹಾಗೂ ಮಕ್ಕಳ ಜೀವನಗಳನ್ನು ಹಾಳು ಮಾಡಿದ್ದಾನೆ, ಇದೀಗ ಆತ ಒಬ್ಬ ಹೊಟ್ಟೆಕಿಚ್ಚಿನ ಮಹಿಳೆಯಂತೆ ವರ್ತಿಸುತ್ತಿದ್ದಾನೆ. ಎಲ್ಲವೂ ನಾಜೂಕಾಗಿ ಹೋಗುತ್ತಿದೆ. ನಾನು ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಎಲ್ಲರಿಗೂ ಗೊತ್ತು,” ಎಂದಿದ್ದಾರೆ.

ತಮ್ಮ ಎರಡನೇ ಪತ್ನಿ ಕಿರಣ್‌ ರಾವ್‌ ಜೊತೆಗೆ 15 ವರ್ಷಗಳ ಕಾಲ ಸಂಸಾರ ಮಾಡಿದ ಬಳಿಕ ಆಕೆಗೆ ವಿಚ್ಛೇದನ ನೀಡುತ್ತಿರುವುದಾಗಿ ಅಮೀರ್‌ ಖಾನ್ ಇತ್ತೀಚೆಗಷ್ಟೇ ಘೋಷಿಸಿದ್ದರು. ಅಮೀರ್‌ ಇದಕ್ಕೂ ಮುನ್ನ ರೀನಾ ದತ್ತಾರೊಂದಿಗೆ ವಿವಾಹವಾಗಿದ್ದರು.

ಇತ್ತೀಚೆಗೆ ತಮ್ಮ ಪುತ್ರ ನಾಗಚೈತನ್ಯ ವೈವಾಹಿಕ ಜೀವನದ ಕುರಿತಂತೆ ಟ್ವೀಟ್ ಮಾಡಿದ್ದ ಟಾಲಿವುಡ್ ಸೂಪರ್‌ಸ್ಟಾರ್‌ ನಾಗಾರ್ಜುನ, “ಭಾರವಾದ ಹೃದಯದಿಂದ ನಾನು ಇದನ್ನು ಹೇಳುತ್ತಿದ್ದೇನೆ! ಸ್ಯಾಮ್ ಹಾಗೂ ಚೇ ನಡುವೆ ಏನೆಲ್ಲಾ ಆಯಿತೋ ಅದು ಬಹಳ ದುರದೃಷ್ಟಕರ. ಪತಿ-ಪತ್ನಿಯರ ನಡುವೆ ಏನಾಗುತ್ತೋ ಅದೆಲ್ಲಾ ವೈಯಕ್ತಿಕ ವಿಚಾರ. ಸ್ಯಾಮ್ ಮತ್ತು ಚೇ ಇಬ್ಬರೂ ನನಗೆ ಆಪ್ತರು. ಸ್ಯಾಮ್ ಜೊತೆ ಕಳೆದ ಕ್ಷಣಗಳನ್ನು ನನ್ನ ಕುಟುಂಬ ಯಾವಾಗಲೂ ನೆನಪಿಸಿಕೊಳ್ಳುತ್ತದೆ ಮತ್ತು ಆಕೆ ನಮಗೆ ಸದಾ ಆಪ್ತಳಾಗಿಯೇ ಇರಲಿದ್ದಾಳೆ! ದೇವರು ಇಬ್ಬರಿಗೂ ಶಕ್ತಿ ನೀಡಲಿ,” ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...