alex Certify ರಷ್ಯಾ ಯುದ್ಧದ ನಡುವೆ ಉಕ್ರೇನ್ ಅಧ್ಯಕ್ಷ ಮಹತ್ವದ ಘೋಷಣೆ: ಶಾಂತಿ ಮಾತುಕತೆ ಬಗ್ಗೆ ಹೆಚ್ಚಿದ ಕುತೂಹಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾ ಯುದ್ಧದ ನಡುವೆ ಉಕ್ರೇನ್ ಅಧ್ಯಕ್ಷ ಮಹತ್ವದ ಘೋಷಣೆ: ಶಾಂತಿ ಮಾತುಕತೆ ಬಗ್ಗೆ ಹೆಚ್ಚಿದ ಕುತೂಹಲ

ಕೈವ್: ಅಂತರರಾಷ್ಟ್ರೀಯ ಸೈನ್ಯ ರಚನೆ ಮಾಡಲಾಗುವುದು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಘೋಷಣೆ ಮಾಡಿದ್ದಾರೆ.

ರಷ್ಯಾ ದೇಶದ ವಿರುದ್ಧ ಹೋರಾಡಲು ಜನ ಬಯಸುತ್ತಿದ್ದಾರೆ. ವಿಶ್ವದ ಸುರಕ್ಷತೆಗಾಗಿ ಹೊಸ ಸೇನೆಯನ್ನೇ ರಚಿಸುತ್ತೇವೆ. ಇದರ ಬಗ್ಗೆ ವಿಶ್ವದಾದ್ಯಂತ ಸಾವಿರಾರು ಜನರು ಮನವಿ ಮಾಡಿದ್ದಾರೆ. ಹೀಗಾಗಿ ಹೊಸ ವಿಶ್ವ ಸೇನೆ ರಚನೆ ಮಾಡುವುದಾಗಿ ಅವರು ಹೇಳಿದ್ದಾರೆ.

ಪುಟಿನ್ 21 ನೇ ಶತಮಾನದ ಹಿಟ್ಲರ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 21 ನೇ ಶತಮಾನದ ಹಿಟ್ಲರ್ ಎಂದು ಉಕ್ರೇನ್ ವಿದೇಶಾಂಗ ಸಚಿವ ಟೀಕಿಸಿದ್ದಾರೆ.

ಉಕ್ರೇನ್ ತೊರೆದ 5 ಲಕ್ಷ ಜನ

ರಷ್ಯಾ ಯುದ್ಧದಿಂದಾಗಿ ಐದು ಲಕ್ಷ ಜನರು ಉಕ್ರೇನ್ ತೊರೆದಿದ್ದಾರೆ. ಜೀವಭಯದಿಂದ ಐದು ಲಕ್ಷ ಜನ ಉಕ್ರೇನ್ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯಿಂದ ಮಾಹಿತಿ ನೀಡಲಾಗಿದೆ.

ಶಾಂತಿ ಮತುಕತೆ ಬಗ್ಗೆ ಹೆಚ್ಚಿದ ನಿರೀಕ್ಷೆ

ರಷ್ಯಾ -ಯುಕ್ರೇನ್ ನಿಯೋಗದ ನಡುವೆ ಶಾಂತಿ ಮಾತುಕತೆ ನಡೆದಿದೆ. ಉಕ್ರೇನ್ ಮತ್ತು ಬೆಲಾರಸ್ ಗಡಿಯಲ್ಲಿ ನಿಯೋಗಗಳ ನಡುವೆ ಚರ್ಚೆ ನಡೆದಿದೆ. ರಾಯಭಾರಿಗಳನ್ನು ವಾಪಸ್ ಕರೆಸುವ ಚಿಂತನೆ ಇಲ್ಲ. ಶಾಂತಿ ಮಾತುಕತೆಯಲ್ಲಿ ಉಕ್ರೇನ್ ರಕ್ಷಣಾ ಸಚಿವರು ಭಾಗಿಯಾಗಿದ್ದು, ಮಹತ್ವದ ಶಾಂತಿ ಮಾತುಕತೆ ನಡೆದಿದೆ.

ಹಿಡಿತ ಸಾಧಿಸಿದ ರಷ್ಯಾ

ಉಕ್ರೇನ್ ಹಲವು ನಗರಗಳ ನಂತರ ವೈಮಾನಿಕ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದೇವೆ ಎಂದು ರಷ್ಯಾ ಹೇಳಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...