alex Certify ಆರ್.​​ಎಸ್.​ಎಸ್. ನ್ನು ತಾಲಿಬಾನ್‌ ಗೆ​ ಹೋಲಿಕೆ ಮಾಡಿದ ಜಾವೇದ್‌ ಅಖ್ತರ್‌ ಗೆ ಕೋರ್ಟ್‌ ನೋಟಿಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್.​​ಎಸ್.​ಎಸ್. ನ್ನು ತಾಲಿಬಾನ್‌ ಗೆ​ ಹೋಲಿಕೆ ಮಾಡಿದ ಜಾವೇದ್‌ ಅಖ್ತರ್‌ ಗೆ ಕೋರ್ಟ್‌ ನೋಟಿಸ್

ಆರ್​.ಎಸ್​.ಎಸ್. ​​​ನ್ನು ತಾಲಿಬಾನ್​ಗೆ ಹೋಲಿಕೆ ಮಾಡಿದ ಗೀತ ರಚನೆಕಾರ ಜಾವೇದ್​ ಅಖ್ತರ್​ ವಿರುದ್ಧ ಆರ್​.ಎಸ್.ಎಸ್.​ ಕಾರ್ಯಕರ್ತ ವಿವೇಕ್​ ಚಂಪಾನೇಕರ್​ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಈ ಸಂಬಂಧ ಅರ್ಜಿ ಕೈಗೆತ್ತಿಕೊಂಡ ಥಾಣೆ ಕೋರ್ಟ್​ ಜಾವೇದ್​ ಅಖ್ತರ್​ಗೆ ನೋಟಿಸ್​ ಕಳುಹಿಸಿದೆ. ನೋಟಿಸ್​ನಲ್ಲಿ ನವೆಂಬರ್ 12ರಂದು ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಬಾಲಿವುಡ್​ ಗೀತ ರಚನೆಕಾರ ಈ ತಿಂಗಳ ಆರಂಭದಲ್ಲಿ ತಾಲಿಬಾನಿಗಳು ಇಸ್ಲಾಮಿಕ್​ ದೇಶವನ್ನು ಬಯಸುತ್ತಾರೆ. ಈ ಜನರು ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಬಯಸುತ್ತಾರೆ ಎಂದು ಹೇಳಿದ್ದರು. ಆರ್.​ಎಸ್​.ಎಸ್.​ ಹೆಸರನ್ನು ಹೇಳದೇ ಜಾವೇದ್​ ಅಖ್ತರ್​ ಈ ಹೇಳಿಕೆ ನೀಡಿದ್ದರೂ ಸಹ ಸಾಕಷ್ಟು ವಿವಾದಕ್ಕೆ ನಾಂದಿ ಹಾಡಿತ್ತು.

ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಆದಿತ್ಯ ಮಿಶ್ರಾ, ಜಾವೇದ್ ಅಖ್ತರ್​ ನಾಗ್ಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಹಿಂದೂ ಸಂಘಟನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಜಾವೇದ್​ ಅಖ್ತರ್​ ಬಳಿ 1 ರೂಪಾಯಿ ಪರಿಹಾರ ಕೋರಿದ್ದಾರೆ.

ಜಾವೇದ್​ ಅಖ್ತರ್​ ನೀಡಿರುವ ಈ ಹೇಳಿಕೆಯು ಸಾಮಾನ್ಯ ಜನರ ದೃಷ್ಠಿಯಲ್ಲಿ ಆರ್.​ಎಸ್​.ಎಸ್. ಚಿತ್ರಣವನ್ನು ಹಾಳು ಮಾಡುವಂತಿದೆ. ಅನಾಗರಿಕ ತಾಲಿಬಾನ್​ ಹಾಗೂ ಹಿಂದೂ ಧರ್ಮದ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಸಂಘಟನೆಗಳನ್ನು ಒಂದೇ ಎಂದು ಹೇಳುವುದು ನಿಂದನೆಯ ಉದ್ದೇಶವನ್ನು ಹೊಂದಿದೆ ಎಂದು ವಿವೇಕ್ ಚಂಪಾನೇಕರ್‌ ಹೇಳಿದ್ದಾರೆ.​

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...