alex Certify ಚಾಕು ಇರಿತಕ್ಕೆ ಒಳಗಾಗಿದ್ದ ಆರ್.ಎಸ್.ಎಸ್. ಮುಖಂಡ ರವಿ ದೂರು: ಕೊಲ್ಲುವ ಉದ್ದೇಶದಿಂದಲೇ ದಾಳಿ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಕು ಇರಿತಕ್ಕೆ ಒಳಗಾಗಿದ್ದ ಆರ್.ಎಸ್.ಎಸ್. ಮುಖಂಡ ರವಿ ದೂರು: ಕೊಲ್ಲುವ ಉದ್ದೇಶದಿಂದಲೇ ದಾಳಿ ಆರೋಪ

ಕೋಲಾರ: ಕ್ಷುಲ್ಲಕ ಕಾರಣಕ್ಕೆ ಆರ್.ಎಸ್.ಎಸ್. ಮುಖಂಡನಿಗೆ ಚಾಕು ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನನ್ನನ್ನು ಕೊಲ್ಲುವ ಉದ್ದೇಶದಿಂದಲೇ ಚಾಕುವಿನಿಂದ ಇರಿಯಲಾಗಿದೆ ಎಂದು ಆರ್‌.ಎಸ್‌.ಎಸ್. ಮುಖಂಡ ರವಿ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನನ್ನನ್ನು ಕೊಲೆ ಮಾಡಲೆಂದೇ ಅನ್ಯಕೋಮಿನವರು ಬಂದಿದ್ದರು. ಅನಾವಶ್ಯಕವಾಗಿ ನನ್ನ ಸ್ಟೀಲ್ ಅಂಗಡಿ ಬಳಿ ಜಗಳ ಮಾಡುತ್ತಿದ್ದರು. ನಾನು ಮಾನವೀಯತೆಯಿಂದ ಜಗಳ ಬಿಡಿಸಲು ಮುಂದಾಗಿದ್ದೆ. ಈ ವೇಳೆ ಜೇಬಿನಲ್ಲಿದ್ದ ಚಾಕು ತೆಗೆದು ಇರಿದು ಕೊಲೆಗೆ ಯತ್ನಿಸಿದರು. ವಿ.ಹೆಚ್.ಪಿ. ವಾಲಾ ಎಂದು ನನಗೆ ಇರಿದು ಕೊಲೆಗೆ ಯತ್ನಿಸಿದರು. ಸೈಯದ್ ವಸೀಂ ಮತ್ತು ಸ್ನೇಹಿತರು ಕೃತ್ಯವೆಸಗಿದ್ದಾರೆ. ಅವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಮಾಲೂರು ಠಾಣೆ ಪೋಲಿಸರಿಗೆ ಆರ್.ಎಸ್.ಎಸ್. ಮುಖಂಡ ರವಿ ದೂರು ನೀಡಿದ್ದಾರೆ.

ಮಾಲೂರಿನ ವೆಂಕಟೇಶ್ವರ ದೇವಾಲಯದ ಬಳಿ ರವಿಯವರಿಗೆ ಚಾಕುವಿನಿಂದ ಇರಿಯಲಾಗಿತ್ತು. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...