alex Certify ಹುಮಾಯುನ್‍ ಪುರದ ಬದಲು ʼಹನುಮಾನ್‍ ಪುರʼ ಬೇಕೆಂದ ಬಿಜೆಪಿ ಕೌನ್ಸಿಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಮಾಯುನ್‍ ಪುರದ ಬದಲು ʼಹನುಮಾನ್‍ ಪುರʼ ಬೇಕೆಂದ ಬಿಜೆಪಿ ಕೌನ್ಸಿಲರ್

ಮೊಘಲರ ದಾಳಿ, ಆಡಳಿತ, ದೇವಸ್ಥಾನಗಳ ನಾಶದ ಕುರುವನ್ನು ಅಳಿಸಲು ಹಲವು ಊರುಗಳ ಹೆಸರನ್ನು ಬದಲಿಸುವ ಆಗ್ರಹ ಹೆಚ್ಚುತ್ತಿದೆ.  ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು, ಈಗಾಗಲೇ ಹಲವು ನಗರಗಳ ಹೆಸರು ಮರುನಾಮಕರಣ ಮಾಡಿದ್ದಾರೆ.

ಅದೇ ದಾರಿಯಲ್ಲಿ ಸಾಗಿರುವ ದೆಹಲಿಯ ಸಫ್ದರ್‌ ಜಂಗ್ ಎನ್‍ಕ್ಲೇವ್ ಪ್ರದೇಶದ ಕೌನ್ಸಿಲರ್ ರಾಧಿಕಾ ಅಬ್ರೊಲ್ ಅವರು, ಹುಮಾಯುನ್ ಪುರವನ್ನು ‘ಹನುಮಾನ್ ಪುರ’ ಎಂದು ಮರುನಾಮಕರಣ ಮಾಡಲು ಒತ್ತಾಯಿಸಿದ್ದಾರೆ. ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯ ವಲಯ ಸಮಿತಿ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ರಾಧಿಕಾ ಇರಿಸಿದ್ದಾರೆ.

ಬಿಜೆಪಿ ಕಾರ್ಪೋರೇಟರ್​ ಮೇಲೆ ದಾಳಿ ನಡೆಸಿದ ಪಕ್ಷದ ಕಾರ್ಯಕರ್ತರಿಗೆ ಶಿವಸೇನೆ ಸನ್ಮಾನ….!

ಕಳೆದ ಜುಲೈನಲ್ಲಿ ಕೌನ್ಸಿಲರ್ ಭಗತ್ ಸಿಂಗ್ ತೊಕಾಸ್ ಅವರು ಮೊಹಮ್ಮದ್ ಪುರ ಗ್ರಾಮದ ಹೆಸರನ್ನು ಮಾಧವಪುರಂ ಎಂದು ಬದಲಾಯಿಸಲು ಪ್ರಸ್ತಾವನೆ ಮಂಡಿಸಿದ್ದರು. ಅದರಂತೆ ದಕ್ಷಿಣ ವಲಯದ ಮೇಯರ್ ಮುಕೇಶ್ ಸೂರ್ಯನ್ ಅವರು ನಿರೀಕ್ಷಣಾ ಅನುಮೋದನೆ ಕೂಡ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...