alex Certify ತಡರಾತ್ರಿ ಬಂದ ಮನೆಗೆ ಮಗಳು ಹೇಳಿದ್ದನ್ನು ಕೇಳಿ ಪೋಷಕರಿಗೆ ಬಿಗ್ ಶಾಕ್: ಪುಸಲಾಯಿಸಿ ಕರೆದೊಯ್ದು ಮತ್ತು ಬರುವ ಪದಾರ್ಥ ನೀಡಿ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ಬಂದ ಮನೆಗೆ ಮಗಳು ಹೇಳಿದ್ದನ್ನು ಕೇಳಿ ಪೋಷಕರಿಗೆ ಬಿಗ್ ಶಾಕ್: ಪುಸಲಾಯಿಸಿ ಕರೆದೊಯ್ದು ಮತ್ತು ಬರುವ ಪದಾರ್ಥ ನೀಡಿ ಅತ್ಯಾಚಾರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ತಂದೆಯ ಮೇಲಿನ ದ್ವೇಷದಿಂದ ಮಗಳನ್ನು ಪುಸಲಾಯಿಸಿ ಕರೆದೊಯ್ದು ಅಮಲ ಬರುವ ಪದಾರ್ಥ ಬೆರೆಸಿ ಕೊಟ್ಟು ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮಹೇಶ್ ಎಂಬಾತನ ವಿರುದ್ಧ ದೂರು ದಾಖಲಾಗಿ ಆತನನ್ನು ಬಂಧಿಸಲಾಗಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

ಆರೋಪಿ ಬಾಲಕಿಯ ತಂದೆಯ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತ ಮಗಳೊಂದಿಗೆ ಮೊಬೈಲ್ನಲ್ಲಿ ಮಾತನಾಡುವುದನ್ನು ಗಮನಿಸಿದ್ದ ಪೋಷಕರು ಎಚ್ಚರಿಕೆ ನೀಡಿ ಕೆಲಸದಿಂದ ಬಿಡಿಸಿದ್ದರು. ಇದರಿಂದ ಆಕ್ರೋಶಗೊಂಡ ಮಹೇಶ್ ಶಾಲೆಗೆ ಹೋಗಿದ್ದ ಬಾಲಕಿಯನ್ನು ಸಮೀಪದ ಹೋಮ್ ಸ್ಟೇ ಗೆ ಕರೆದುಕೊಂಡು ಹೋಗಿ ಅಮಲು ಬರುವ ಪದಾರ್ಥ ಬೆರೆಸಿ ಕೊಟ್ಟು ಅತ್ಯಾಚಾರ ಎಸಗಿದ್ದಾನೆ. ತಡರಾತ್ರಿ ಮನೆಗೆ ಬಂದ ಬಾಲಕಿ ಮಂಕಾಗಿ ಇರುವುದನ್ನು ಗಮನಿಸಿದ ಪೋಷಕರು ವಿಚಾರಿಸಿದಾಗ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...