alex Certify BIG NEWS: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್; ಎನ್ ಐಎಯಿಂದ ಪ್ರಕರಣ ದಾಖಲು; ಎರಡು ದನಗಳಲ್ಲಿ ತನಿಖೆ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್; ಎನ್ ಐಎಯಿಂದ ಪ್ರಕರಣ ದಾಖಲು; ಎರಡು ದನಗಳಲ್ಲಿ ತನಿಖೆ ಆರಂಭ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಗಂಭೀರತೆ ಅರಿತು ಬಾಂಬ್ ಸ್ಫೋಟ ಕೇಸ್ ನ್ನು ಎನ್ ಐಎ ವರ್ಗಾಯಿಸಲಾಗಿದ್ದು, ಯುಎಪಿಎ ಅಡಿ ಹೆಚ್ ಎ ಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನೆರಡು ದಿನಗಳಲ್ಲಿ ಎನ್ ಐ ಎ ಅಧಿಕಾರಿಗಳಿಂದ ತನಿಖೆ ನಡೆಯಲಿದೆ.

ಇನ್ನೊಂದೆಡೆ ಬಾಂಬ್ ಸ್ಫೋಟದ ಆರೋಪಿಯ ಕೆಲ ಕುರುಹುಗಳು ಪತ್ತೆಯಾಗಿದ್ದು, ಆತನಿಗಾಗಿ ಶೋಧಕಾರ್ಯ ಮುಂದುವರೆದಿದೆ. ಆರೋಪಿ ಪತ್ತೆಯಾಗದಿದ್ದಲ್ಲಿ ಪೊಲೀಸರು ಶೀಘ್ರದಲ್ಲೇ ರೇಖಾಚಿತ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನು ರಾಮೇಶ್ವರಂ ಕೆಫೆಯಿಂದ 1 ಕಿ.ಮೀ ದೂರದಲ್ಲಿರುವ ಸಿಸಿಟಿವಿಯಲ್ಲಿ ಶಂಕಿತ ಓಡಾಟ ಸೆರೆಯಾಗಿದೆ. ಬಾಂಬ್ ಇಡಲು ಯಾವ ಮಾರ್ಗದಲ್ಲಿ ಬಂದಿದ್ದನೋ ಅದೇ ಮಾರ್ಗದಲ್ಲಿ ಆತ ವಾಪಾಸ್ ಆಗಿಲ್ಲ. ಬೇರೆ ಯಾವ ಮಾರ್ಗದ ಮೂಲಕ ತೆರಳಿದ್ದಾನೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...