ನನ್ನ ಸುದ್ದಿಗೆ ಬಂದರೆ ಹುಷಾರ್…! ಆಪ್ ಶಾಸಕನಿಗೆ ರಾಖಿ ಸಾವಂತ್ ಖಡಕ್ ವಾರ್ನಿಂಗ್ 18-09-2021 1:12PM IST / No Comments / Posted In: Featured News, Live News, Entertainment ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿರುದ್ಧ ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಡ್ಡಾ ಆಕ್ರೋಶ ಹೊರಹಾಕಿದ್ದರು. ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾತನಾಡುತ್ತಿರುವ ನವಜೋತ್ ಸಿಧು ಪಂಜಾಬ್ ರಾಜಕೀಯದ ರಾಖಿ ಸಾವಂತ್ ಎಂದು ಜರಿದಿದ್ದರು. ರಾಘವ್ ಚಡ್ಡಾರ ಈ ಹೇಳಿಕೆಯ ವಿರುದ್ಧ ಬಿಗ್ ಬಾಸ್ ಸೀಸನ್ 14ರ ಸ್ಪರ್ಧಿ ಹಾಗೂ ಬಾಲಿವುಡ್ ನಟಿ ರಾಖಿ ಸಾವಂತ್, ನನ್ನ ಹಾಗೂ ನನ್ನ ಹೆಸರಿನಿಂದ ದೂರವಿರಿ ಎಂದು ರಾಘವ್ ಚಡ್ಡಾಗಿ ವಾರ್ನಿಂಗ್ ನೀಡಿದ್ದಾರೆ. ನವಜೋತ್ ಸಿಂಗ್ ಸಿಧು ವಿರುದ್ಧ ನಿನ್ನೆ ಹೇಳಿಕೆ ನೀಡಿದ್ದ ರಾಘವ್ ಚಡ್ಡಾ, ಕ್ಯಾಪ್ಟನ್ ವಿರುದ್ಧ ನಿರಂತರ ಹೇಳಿಕೆ ನೀಡಿದ ಬಳಿಕ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಹೈಕಮಾಂಡ್ನಿಂದ ಬೈಸಿಕೊಂಡಿದ್ದಾರೆ. ಹೀಗಾಗಿ ಅವರು ಈ ಬಾರಿ ಅರವಿಂದ್ ಕೇಜ್ರಿವಾಲ್ ಹಿಂದೆ ಬಿದ್ದಿದ್ದಾರೆ. ನಾಳೆಯಿಂದ ಅವರು ಮತ್ತೆ ಕ್ಯಾಪ್ಟನ್ ವಿರುದ್ಧ ಹೇಳಿಕೆ ನೀಡಲು ಆರಂಭಿಸಬಹುದು. ಸಿಧು ಪಂಜಾಬ್ ರಾಜಕೀಯದ ರಾಖಿ ಸಾವಂತ್ ಎಂದು ಟ್ವೀಟಾಯಿಸಿದ್ದರು. ರಾಘವ್ ಚಡ್ಡಾರ ಈ ಹೇಳಿಕೆಯು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಬಿಗ್ಬಾಸ್ ಸೀಸನ್ 14ರ ಸ್ಪರ್ಧಿ ಹಾಗೂ ನಟಿ ಕವಿತಾ ಕೌಶಿಕ್ ಕೂಡ ರಾಜಕೀಯದಲ್ಲಿ ಮಹಿಳೆಯರ ಹೆಸರನ್ನು ಎಳೆದು ತಂದ ಚಡ್ಡಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸಾಕಷ್ಟು ಮಂದಿ ನೆಟ್ಟಿಗರು ಕೂಡ ಚಡ್ಡಾರನ್ನು ಸ್ತ್ರೀವಿರೋಧಿ ಎಂದು ಜರಿದಿದ್ದಾರೆ. ರಾಖಿ ಸಾವಂತ್ ಪತಿ ಎಂದು ಹೇಳಿಕೊಳ್ಳುವ ರಿತೇಶ್ ಕೂಡ ಆಪ್ ಶಾಸಕನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕಮೆಂಟ್ನ ಫೋಟೋ ಶೇರ್ ಮಾಡಿರುವ ರಾಖಿ, ನನ್ನ ಪತಿ ರಾಘವ್ ಚಡ್ಡಾಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಒಂಟಿ ಎಂದು ಭಾವಿಸಿ ಅನೇಕರು ನನಗೆ ತೊಂದರೆ ನೀಡುತ್ತಿದ್ದರು. ನನಗಾಗಿಯೂ ಯಾರೋ ಇದ್ದಾರೆ, ಅವರು ನನ್ನ ರಕ್ಷಣೆ ಮಾಡುತ್ತಾರೆ ಎಂದು ಹೇಳುವಾಗ ನನ್ನ ಕಣ್ಣು ತುಂಬಿ ಬರ್ತಿದೆ. ನನ್ನ ಪ್ರೀತಿಯ ಪತಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. View this post on Instagram A post shared by Rakhi Sawant (@rakhisawant2511)