alex Certify ರಾಜ್ಯಸಭಾ 13 ಸ್ಥಾನಗಳಿಗೆ ಚುನಾವಣೆ; ಎಎಪಿ ಅವಿರೋಧ ಆಯ್ಕೆ ಸೇರಿ ಇಲ್ಲಿದೆ ಪ್ರಮುಖ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಸಭಾ 13 ಸ್ಥಾನಗಳಿಗೆ ಚುನಾವಣೆ; ಎಎಪಿ ಅವಿರೋಧ ಆಯ್ಕೆ ಸೇರಿ ಇಲ್ಲಿದೆ ಪ್ರಮುಖ ಮಾಹಿತಿ

ರಾಜ್ಯಸಭೆ ಚುನಾವಣೆಯಲ್ಲಿ ಪಂಜಾಬ್‌ ನಿಂದ ಐದು ಎಎಪಿ ನಾಮನಿರ್ದೇಶಿತರು ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ ಈಗ ಐದು ರಾಜ್ಯಗಳತ್ತ ಗಮನ ಹರಿಸಲಾಗಿದೆ.

ಅಸ್ಸಾಂ, ಕೇರಳ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಗುರುವಾರ ಎಂಟು ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯಲಿದೆ. ಅಸ್ಸಾಂನಿಂದ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದ್ದರೆ, ಕೇರಳದಿಂದ ಮೂವರನ್ನು ಆಯ್ಕೆ ಮಾಡಲಾಗುತ್ತದೆ. ಹಿಮಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ತ್ರಿಪುರಾ ತಲಾ ಒಬ್ಬ ಸಂಸದರನ್ನು ಆಯ್ಕೆ ಮಾಡುತ್ತವೆ.

ಪಂಜಾಬ್‌ ನಲ್ಲಿ ಏಪ್ರಿಲ್‌ ನಲ್ಲಿ ಐದು ಸಂಸದರ ಅವಧಿ ಕೊನೆಗೊಳ್ಳುತ್ತದೆ. ಅಕಾಲಿದಳದ ಸುಖದೇವ್ ಸಿಂಗ್ ಮತ್ತು ನರೇಶ್ ಗುಜ್ರಾಲ್, ಕಾಂಗ್ರೆಸ್‌ ನ ಪ್ರತಾಪ್ ಸಿಂಗ್ ಬಾಜ್ವಾ ಮತ್ತು ಶಂಶೇರ್ ಸಿಂಗ್ ಡುಲ್ಲೋ ಮತ್ತು ಬಿಜೆಪಿಯ ಶ್ವೈತ್ ಮಾಲಿ. ಕೇರಳದ ಎ. ಕೆ. ಆಂಟನಿ, ಎಡಮಿತ್ರ ಎಂ.ವಿ. ಶ್ರೇಯಮ್ಸ್ ಕುಮಾರ್, ಸಿಪಿಐನ ಸೋಮಪ್ರಸಾದ್ ಕೆ., ಅಸ್ಸಾಂ ಸಂಸದ ರಾನೀ ನಾರಾ, ರಿಪುನ್ ಬೋರಾ ಕೂಡ ಏಪ್ರಿಲ್‌ನಲ್ಲಿ ನಿವೃತ್ತರಾಗಲಿದ್ದಾರೆ. ಹಿಮಾಚಲ ಪ್ರದೇಶ ಪ್ರತಿನಿಧಿಸುವ ಜಿ-23 ನಾಯಕ ಕಾಂಗ್ರೆಸ್‌ ನ ಆನಂದ್ ಶರ್ಮಾ, ನಾಗಾಲ್ಯಾಂಡ್‌ನ ಕೆಜಿ ಕೆನ್ಯೆ ಮತ್ತು ತ್ರಿಪುರಾದ ಜರ್ನಾ ದಾಸ್(ಬೈದ್ಯ) ಕೂಡ ನಿವೃತ್ತರಾಗಲಿರುವ 13 ಸಂಸದರಲ್ಲಿ ಸೇರಿದ್ದಾರೆ.

ಪಂಜಾಬ್‌ನಲ್ಲಿ ಭಾರಿ ಗೆಲುವಿನ ನಂತರ, ಎಎಪಿ ಪಂಜಾಬ್‌ನಿಂದ ಅವಿರೋಧವಾಗಿ ಆಯ್ಕೆಯಾದ ಐದು ನಾಮನಿರ್ದೇಶಿತರನ್ನು ಆಯ್ಕೆ ಮಾಡಿದೆ – ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ದೆಹಲಿ ಶಾಸಕ ರಾಘವ್ ಚಡ್ಡಾ, ಐಐಟಿ-ದೆಹಲಿ ಪ್ರೊಫೆಸರ್ ಸಂದೀಪ್ ಪಾಠಕ್, ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಮಿತ್ತಲ್ ಮತ್ತು ಕೈಗಾರಿಕೋದ್ಯಮಿ ಸಂಜೀವ್ ಅರೋರಾ. ಇದಕ್ಕೆ ಕಾಂಗ್ರೆಸ್ ಆಕ್ಷೇಪಿಸಿದ್ದು, ಅಭ್ಯರ್ಥಿಗಳು ಪಂಜಾಬ್‌ ನವರಾಗಿರಬೇಕು ಎಂದು ಹೇಳಿದೆ.

ಅಸ್ಸಾಂನ ಬಿಜೆಪಿ ವಕ್ತಾರ ಪಬಿತ್ರಾ ಮಾರ್ಗರಿಟಾ ಅವರನ್ನು ಆಡಳಿತ ಪಕ್ಷವು ಎರಡು ಸ್ಥಾನಗಳಲ್ಲಿ ಒಂದಕ್ಕೆ ಆಯ್ಕೆ ಮಾಡಿದೆ. ಬಿಜೆಪಿಯ ಮೈತ್ರಿಕೂಟದ ಪಾಲುದಾರ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್(ಯುಪಿಪಿಎಲ್) ರಂಗ್ವ್ರಾ ನರ್ಝರಿ ಮತ್ತೊಂದು ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಏಪ್ರಿಲ್ 2 ಕ್ಕೆ ಅವಧಿ ಮುಗಿಯಲಿರುವ ಕಾಂಗ್ರೆಸ್‌ ನ ರೂಪಿನ್ ಬೋರಾ ಅವರನ್ನು ಮತ್ತೆ ಪಕ್ಷದಿಂದ ಆಯ್ಕೆ ಮಾಡಲಾಗಿದೆ. ವಿಶ್ಲೇಷಕರ ಪ್ರಕಾರ, ಬಿಜೆಪಿ 126 ವಿಧಾನಸಭಾ ಸ್ಥಾನಗಳಲ್ಲಿ 83 ಅನ್ನು ಹೊಂದಿರುವುದರಿಂದ ಮಾರ್ಗರಿಟಾ ಅವರ ಗೆಲುವು ಬಹುತೇಕ ಖಚಿತವಾಗಿದೆ. ಎರಡನೇ ಸ್ಥಾನಕ್ಕಾಗಿ, ನರ್ಜರಿ ಮತ್ತು ಬೋರಾ ಹೋರಾಡಬೇಕಾಗುತ್ತದೆ.

ರಾಜ್ಯಸಭಾ ಚುನಾವಣೆಗೆ ಮುಂಚಿತವಾಗಿ, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(AIUDF) ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ನಮ್ಮ ಐವರು ಶಾಸಕರ ಪ್ರಾಮಾಣಿಕತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಹಾಜರಿರುವಂತೆ ಎಐಯುಡಿಎಫ್ ತನ್ನ 15 ಶಾಸಕರಿಗೆ ವಿಪ್ ಜಾರಿ ಮಾಡಿದೆ. ಅಸ್ಸಾಂನಲ್ಲಿ ಒಬ್ಬ ಅಭ್ಯರ್ಥಿ ಚುನಾಯಿತರಾಗಲು 43 ಮತಗಳ ಅಗತ್ಯವಿದೆ. ಕಾಂಗ್ರೆಸ್ (26), ಎಐಯುಡಿಎಫ್ (15), ಸಿಪಿಐ (ಎಂ), ಮತ್ತು ರೈಜೋರ್ ದಳ 43 ಮತಗಳನ್ನು ಹೊಂದಿವೆ. ಅಮಾನತುಗೊಂಡಿರುವ ಕಾಂಗ್ರೆಸ್ ಶಾಸಕರು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಕ್ಕೆ ಮತ ಹಾಕುವ ನಿರೀಕ್ಷೆಯಿದೆ. ಎಐಯುಡಿಎಫ್ ಬೋರಾಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ.

ಅಸ್ಸಾಂ ಒಟ್ಟು ಏಳು ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸುತ್ತದೆ. ಬೋರಾ ಮತ್ತು ನಾರಾ ಹೊಂದಿರುವ ಇಬ್ಬರ ಜೊತೆಗೆ, ಮೂವರು ಬಿಜೆಪಿ(ಸರ್ಬಾನಂದ ಸೋನೊವಾಲ್, ಭುವನೇಶ್ವರ ಕಲಿತಾ ಮತ್ತು ಕಾಮಾಖ್ಯ ಪ್ರಸಾದ್ ತಾಸಾ), ಒಬ್ಬರು ಬಿಜೆಪಿಯ ಮಿತ್ರ ಅಸೋಮ್ ಗಣ ಪರಿಷತ್(ಬೀರೇಂದ್ರ ಪ್ರಸಾದ್ ಬೈಶ್ಯಾ) ಮತ್ತು ಒಬ್ಬರು ಅಂಚಲಿಕ್ ಗಣ ಮೋರ್ಚಾ (ಅಜಿತ್ ಕುಮಾರ್ ಭುಯಾನ್) ಜೊತೆಯಲ್ಲಿದ್ದಾರೆ. .

ಕೇರಳದ ಜೆಬಿ ಮಾಥರ್ ಅವರು 42 ವರ್ಷಗಳ ನಂತರ ದಕ್ಷಿಣ ರಾಜ್ಯದಿಂದ ಕಾಂಗ್ರೆಸ್ ಆಯ್ಕೆ ಮಾಡಿದ ಮೊದಲ ಮಹಿಳಾ ಅಭ್ಯರ್ಥಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...