alex Certify ನೀರುಗಳ್ಳತನ ತಡೆಯಲು ಸ್ಥಾಪನೆಯಾಗಿದೆ ಪೊಲೀಸ್‌ ಠಾಣೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರುಗಳ್ಳತನ ತಡೆಯಲು ಸ್ಥಾಪನೆಯಾಗಿದೆ ಪೊಲೀಸ್‌ ಠಾಣೆ…!

ನಿಮಗಿದು ವಿಚಿತ್ರ ಎಂದು ಎನಿಸಬಹುದು. ಆದರೆ ರಾಜಸ್ಥಾನದ ಹನುಮಾನಗರ ಜಿಲ್ಲೆಯ ಪೊಲೀಸರು ಮಾತ್ರ ನೀರು ಕಳ್ಳಸಾಕಣಿಕೆಯನ್ನ ತಪ್ಪಿಸುವ ಸಲುವಾಗಿ ವಿಶೇಷ ಪೊಲೀಸ್​ ಠಾಣೆಯನ್ನೇ ಸ್ಥಾಪನೆ ಮಾಡಿದ್ದಾರೆ.

ಈ ಪ್ರದೇಶದಲ್ಲಿರುವ ಇಂದಿರಾ ಗಾಂಧಿ ಕಾಲುವೆ ಮೂಲಕ ನೀರನ್ನ ಕದಿಯುತ್ತಿರುವವರ ಮೇಲೆ ಕಣ್ಣಿಡುವ ಸಲುವಾಗಿ ರಾಜಸ್ಥಾನ ಸರ್ಕಾರ ಈ ವಿಶಿಷ್ಟ ನಿರ್ಧಾರವನ್ನ ಕೈಗೊಂಡಿದೆ. ಈ ಪ್ರದೇಶದಲ್ಲಿ ಪದೇ ಪದೇ ವರದಿಯಾಗುತ್ತಿರುವ ನೀರುಗಳ್ಳತನದ ಬಗ್ಗೆ ತತ್​ಕ್ಷಣ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ 60 ಪೊಲೀಸ್​ ಸಿಬ್ಬಂದಿಯನ್ನ ನಿಯೋಜಿಸಲಾಗುತ್ತದೆ.

ನೀರುಗಳ್ಳತನವನ್ನ ತಪ್ಪಿಸಲೆಂದೇ ನಿರ್ಮಾಣವಾಗುತ್ತಿರುವ ಈ ಪೊಲೀಸ್​ ಠಾಣೆಯಲ್ಲಿ ಓರ್ವ ಸಿಐ, 5 ಸಬ್​ ಇನ್​ಸ್ಪೆಕ್ಟರ್​, 8 ಮಂದಿ ಮುಖ್ಯ ಪೇದೆ ಹಾಗೂ 40 ಮಂದಿ ಪೇದೆ ಇರಲಿದ್ದಾರೆ ಎಂದು ನೋಹಾರ್​ನ ಶಾಸಕ ಅಮಿತ್​ ಚಾಚನ್​ ಮಾಹಿತಿ ನೀಡಿದ್ರು. ಅಲ್ಲದೇ ಪ್ರಭಾವಿ ರೈತರು ತಮ್ಮ ಪ್ರಭಾವ ಬಳಸಿ ನೀರನ್ನ ಪಡೆಯುತ್ತಿದ್ದರೆ ಬಡ ರೈತರು ಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದ್ರು.

ಕಳೆದ ನಾಲ್ಕು ವರ್ಷಗಳಲ್ಲಿ ಹನುಮಾನ್​​ ನಗರ ಜಿಲ್ಲೆಯೊಂದರಲ್ಲೇ 74 ನೀರುಗಳ್ಳತನದ ಪ್ರಕರಣವು ದಾಖಲಾಗಿದೆ. ಇದರಲ್ಲಿ 28 ಪ್ರಕರಣವು ಭಿರಾನಿ ಠಾಣೆಯೊಂದರಲ್ಲೇ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...