alex Certify ಆಸ್ತಿ ವಿಚಾರಕ್ಕೆ ಜಗಳ: ಅಕ್ಕನನ್ನೇ ಕೊಂದ ತಮ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿ ವಿಚಾರಕ್ಕೆ ಜಗಳ: ಅಕ್ಕನನ್ನೇ ಕೊಂದ ತಮ್ಮ

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಗುಳ್ಳೆಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಆಸ್ತಿ ವಿಚಾರಕ್ಕೆ ಅಕ್ಕನನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಪ್ರಭಾಕರ ಎಂಬಾತ ಸಹೋದರಿ ಅಕ್ಕಮ್ಮ(64) ಅವರನ್ನು ಕೊಲೆ ಮಾಡಿದ್ದಾನೆ. ಪ್ರಕರಣದ ಸಂಬಂಧ ಪ್ರಭಾಕರ್ ಮತ್ತು ಆತನ ಪುತ್ರ ದಿಲೀಪ್, ಪುತ್ರಿ ತ್ರಿವೇಣಿಯನ್ನು ಚನ್ನಗಿರಿ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಅಕ್ಕಮ್ಮ, ಪ್ರಭಾಕರ ನಡುವೆ ಜಮೀನು ವಿವಾದ ಕೋರ್ಟ್ ನಲ್ಲಿತ್ತು. ಕೋರ್ಟ್ ಅನುಮತಿ ಪಡೆದು ಅಕ್ಕಮ್ಮ ಜಮೀನು ಅಳತೆಗೆ ಬಂದಿದ್ದರು. ಸರ್ವೇಯರ್ ಜೊತೆಗೆ ಜಮೀನಿಗೆ ಬಂದಿದ್ದಾಗ ಸಹೋದರ ಪ್ರಭಾಕರ್ ಅಡ್ಡಿಪಡಿಸಿದ್ದಾನೆ. ಸರ್ವೇ ಮಾಡಿಸಬಾರದೆಂದು ಪ್ರಭಾಕರ ಮತ್ತು ಆತನ ಪುತ್ರ ದಿಲೀಪ್ ಗಲಾಟೆ ಮಾಡಿದ್ದಾರೆ.

ಸರ್ವೇ ಮಾಡಿಸಬಾರದೆಂದು ಗಲಾಟೆ ಮಾಡಿದ್ದು, ಅಕ್ಕಮ್ಮನ ಮೇಲೆ ಕುಡುಗೋಲಿನಿಂದ ದಿಲೀಪ್ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಅಕ್ಕಮ್ಮನ ಮೇಲೆ ಪ್ರಭಾಕರ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ತಮ್ಮ ಪ್ರಭಾಕರನಿಂದ ಹಲ್ಲೆಗೊಳಗಾದ ಸಹೋದರಿ ಅಕ್ಕಮ್ಮ ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...