alex Certify ಪ್ರಯಾಣಿಕರೇ ಗಮನಿಸಿ: ಇಂದು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ; ಹಲವು ರೈಲು ಸೇವೆ ರದ್ದು, ವ್ಯತ್ಯಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರೇ ಗಮನಿಸಿ: ಇಂದು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ; ಹಲವು ರೈಲು ಸೇವೆ ರದ್ದು, ವ್ಯತ್ಯಯ

ಬೆಂಗಳೂರು: ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು 11 ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಕಣ್ಣೂರು -ಕೆಎಸ್ಆರ್ ಎಕ್ಸ್ಪ್ರೆಸ್ ರೈಲು ಸಂಚಾರ ರದ್ದು ಮಾಡಲಾಗಿದೆ. ಅರಸೀಕೆರೆ -ಕೆಎಸ್ಆರ್ ಸ್ಪೆಷಲ್ ಎಕ್ಸ್ಪ್ರೆಸ್ ರೈಲು ಸಂಚಾರವನ್ನೂ ರದ್ದು ಮಾಡಲಾಗಿದೆ. ಕೋಲಾರ -ಯಶವಂತಪುರ ಡೆಮು ಎಕ್ಸ್ಪ್ರೆಸ್, ಮೈಸೂರು -ನಾಯಂಡಹಳ್ಳಿ ಮೆಮು ಎಕ್ಸ್ಪ್ರೆಸ್, ಹಿಂದೂಪುರ -ಯಶವಂತಪುರ ಮೆಮು ಎಕ್ಸ್ಪ್ರೆಸ್, ಮಾರಿಕುಪ್ಪಂ- ಕಂಟೋನ್ಮೆಂಟ್ ಮೆಮು ಎಕ್ಸ್ಪ್ರೆಸ್ ರೈಲು ಸಂಚಾರ ರದ್ದಾಗಿದೆ.

ಕೆಎಸ್ಆರ್ -ತುಮಕೂರು ಎಕ್ಸ್ಪ್ರೆಸ್, ಹಾಸನ -ಕೆಎಸ್ಆರ್ ಡೆಮು ಎಕ್ಸ್ಪ್ರೆಸ್, ಕೆಎಸ್ಆರ್ -ವೈಟ್ಫೀಲ್ಡ್ ಎಕ್ಸ್ಪ್ರೆಸ್, ಮೈಸೂರು -ಕೆಎಸ್ಆರ್ ಮೆಮು ಎಕ್ಸ್ಪ್ರೆಸ್, ಮಾರಿಕುಪ್ಪಂ -ಬೆಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರ ರದ್ದಾಗಿದೆ.

ಶಿವಮೊಗ್ಗ -ಬೆಂಗಳೂರು ಶತಾಬ್ದಿ, ಮೈಸೂರು -ಬೆಂಗಳೂರು ಚಾಮುಂಡಿ ಎಕ್ಸ್ಪ್ರೆಸ್, ಚೆನ್ನೈ -ಮೈಸೂರು ಶತಾಬ್ದಿ ರೈಲು ಓಡಾಟ 60 ರಿಂದ 90 ನಿಮಿಷ ತಡವಾಗಲಿದೆ. ವಿಶ್ವಮಾನವ ರೈಲು ಮೈಸೂರಿನಿಂದ ತಿಪಟೂರು ಮಾರ್ಗದಲ್ಲಿ ಸಂಚರಿಸಲಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆ ವರೆಗೆ ವಿವಿಧ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...