alex Certify ಪಿಹೆಚ್​ಡಿ ಪದವಿ ಪಡೆದರೂ ಸಿಗದ ನೌಕರಿ..! ಬೇಸತ್ತ ಪ್ರತಿಭಾವಂತ ಈಗ ಏನ್ಮಾಡ್ತಿದ್ದಾನೆ ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಹೆಚ್​ಡಿ ಪದವಿ ಪಡೆದರೂ ಸಿಗದ ನೌಕರಿ..! ಬೇಸತ್ತ ಪ್ರತಿಭಾವಂತ ಈಗ ಏನ್ಮಾಡ್ತಿದ್ದಾನೆ ಗೊತ್ತಾ..?

ಆಡಳಿತಾರೂಢ ಕಾಂಗ್ರೆಸ್​ನ ಇಬ್ಬರು ಶಾಸಕರು ತಮ್ಮ ಮಕ್ಕಳಿಗೆ ಉದ್ಯೋಗ ನೀಡುವ ಸಲುವಾಗಿ ಅಕ್ರಮ ನಡೆಸಿದ ಬಳಿಕ ಪಂಜಾಬ್​ನ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಲೆಹ್ರಗಾಗಾದ ಪಿಹೆಚ್​ಡಿ ಪದವೀಧರ ವಿದ್ಯಾರ್ಥಿ ಕೆಲಸ ಪಡೆಯಲು ಸಾಧ್ಯವಾಗದ ಕಾರಣ ಜೀವನೋಪಾಯಕ್ಕಾಗಿ ಜ್ಯೂಸ್​​ ಶಾಪ್​ನ್ನು ತೆರೆದಿದ್ದಾನೆ.

32 ವಷರ್ದ ಚೇತನ್​ ಕುಮಾರ್​​ ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಮಾಡಬೇಕೆಂಬ ಕನಸನ್ನ ಹೊಂದಿದ್ದರು. ಇದಕ್ಕಾಗಿ ಇವರು ಯುಜಿಸಿ – ಎನ್​ಇಟಿ ಪರೀಕ್ಷೆಯನ್ನೂ ಪಾಸ್​ ಮಾಡಿದ್ದರು. ಇಷ್ಟಾದರೂ ಸಹ ಅವರಿಗೆ ಕೆಲಸವನ್ನ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಜೀವನೋಪಾಯಕ್ಕಾಗಿ ಪುಟ್ಟ ಜ್ಯೂಸ್​ ಅಂಗಡಿಯನ್ನ ಮಾಡಿಕೊಂಡಿದ್ದಾರೆ.

ಪದವಿ ಶಿಕ್ಷಣವನ್ನ ಪೂರೈಸಿದ ಬಳಿಕ ನಾನು ಕೆಲಸವನ್ನ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದೆ. ಬಳಿಕ ನನಗೆ ಯುಜಿಸಿ ಎನ್​ಇಟಿ ಪರೀಕ್ಷೆ ಪಾಸ್​ ಮಾಡದೇ ಸರ್ಕಾರಿ ನೌಕರಿ ಸಿಗೋದು ಕಷ್ಟ ಎಂದು ತಿಳಿದ ಬಳಿಕ ನಾನು ಸತತ ಪ್ರಯತ್ನ ಪಟ್ಟು 2019ರಲ್ಲಿ ಪರೀಕ್ಷೆ ಪಾಸ್​ ಮಾಡಿದೆ. ಪಿಹೆಚ್​ಡಿ ಪದವಿ ಪಡೆದ ಬಳಿಕವೂ ನನಗೆ ನೌಕರಿ ಮಾತ್ರ ಸಿಗಲಿಲ್ಲ ಅಂತಾರೆ ಚೇತನ್​ ಕುಮಾರ್​.

ಮನೆಯ ನಿರ್ವಹಣೆ ಮಾಡೋದು ಇನ್ನು ಅಸಾಧ್ಯ ಎಂದು ಎನಿಸಿತು. ಹೀಗಾಗಿ ಜೀವನೋಪಾಯಕ್ಕೆ ಏನಾದರೊಂದು ಮಾಡಲೇಬೇಕೆಂದು ನಿರ್ಧರಿಸಿ ಎರಡು ತಿಂಗಳ ಹಿಂದೆ ಜ್ಯೂಸ್​ ಅಂಗಡಿ ತೆರೆದೆ ಎಂದು ಚೇತನ್​ ಕುಮಾರ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...