alex Certify RSS ಶಾಖೆಗಳಂತೆಯೇ ಪಿಎಫ್​ಐ ತರಬೇತಿ, ವಿವಾದವಾಯ್ತು ಪೊಲೀಸ್ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RSS ಶಾಖೆಗಳಂತೆಯೇ ಪಿಎಫ್​ಐ ತರಬೇತಿ, ವಿವಾದವಾಯ್ತು ಪೊಲೀಸ್ ಹೇಳಿಕೆ

ಆರ್.ಎಸ್.ಎಸ್. ಶಾಖೆಗೆ ಪಿಎಫ್‌ಐ ತರಬೇತಿಯನ್ನು ಹೋಲಿಕೆ ಮಾಡಿದ ಪೊಲೀಸ್​ ಅಧಿಕಾರಿ ವಿರುದ್ಧ ಬಿಜೆಪಿ ನಾಯಕರು ಮುಗಿಬಿದಿದ್ದಾರೆ.

ಪಿಎಫ್‌ಐ ಕೂಡ ಆರ್.ಎಸ್.ಎಸ್. ಶಾಖೆಗಳಂತೆಯೇ ಯುವಕರಿಗೆ ಸಮರ ಕಲೆಗಳಲ್ಲಿ ತರಬೇತಿ ನೀಡುತ್ತದೆ ಎಂದು ಬಿಹಾರ ಪಾಟ್ನಾದ ಪೊಲೀಸ್​ ಅಧಿಕಾರಿ ಹೇಳಿದ್ದಾರೆ, ಈ ಹೇಳಿಕೆ ಆ ರಾಜ್ಯದಲ್ಲಿ ಭಾರಿ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸ್​ ಅಧಿಕಾರಿಗೆ ಶೋಕಾಸ್​ ನೋಟಿಸ್​ ಜಾರಿ ಮಾಡಲಾಗಿದ್ದು, 48 ಗಂಟೆಗಳ ಒಳಗಾಗಿ ವಿವರಣೆ ನೀಡುವಂತೆ ಹಿರಿಯ ಪೊಲೀಸ್​ ಅಧಿಕಾರಿಗೆ ಸೂಚಿಸಲಾಗಿದೆ.

ಪಾಟ್ನಾದ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಮಾನವಜಿತ್​ ಸಿಂಗ್​ ಧಿಲ್ಲೋನ್​ ಅವರು ಮಾಧ್ಯಮಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯ ನೀಡುತ್ತಿದ್ದಂತೆ ವಿವಾದದ ಬಿರುಗಾಳಿ ಎದ್ದಿತು.

ಪಿಎಫ್‌ಐ ಸಂಸ್ಥೆಯು ಯುವಕರನ್ನು ಸಜ್ಜುಗೊಳಿಸಲು ಮಸೀದಿಗಳು ಮತ್ತು ಮದರಸಾಗಳಲ್ಲಿ ಕೆಲಸ ಮಾಡಿದೆ ಮತ್ತು ಅವರನ್ನು ಆಮೂಲಾಗ್ರಗೊಳಿಸಲು ತಯಾರು ಮಾಡುವ ಕೆಲಸ ಮಾಡಿದೆ. ಅದು ಆರೆಸ್ಸೆಸ್​ ಶಾಖೆಗಳ ಕಾರ್ಯ ವಿಧಾನದಂತೆಯೇ ಇತ್ತು. ದೈಹಿಕ ಶಿಕ್ಷಣದ ನೆಪದಲ್ಲಿ ಯುವಕರಿಗೆ ತರಬೇತಿ ನೀಡಿ ತಮ್ಮ ಅಜೆಂಡಾವನ್ನು ಹರಡುತ್ತಾರೆ. ಸಮರ ಕಲೆಗಳನ್ನು ಕಲಿಸುವ ಶಿಬಿರಗಳ ದಾಖಲೆಗಳು ಮತ್ತು ದೈಹಿಕ ತರಬೇತಿಯ ನೆಪದಲ್ಲಿ ಸದಸ್ಯರಿಗೆ ಕೋಲು ಮತ್ತು ಕತ್ತಿಗಳನ್ನು ಬಳಸಲು ತರಬೇತಿ ನೀಡಲಾಯಿತು. ಬ್ರೈನ್ ವಾಶ್​ ಮಾಡಲು ಮತ್ತು ಜನರನ್ನು ಸಜ್ಜುಗೊಳಿಸಲು ಡಾಕ್ಯುಮೆಂಟ್​ ಅನ್ನು ಬಳಸಲಾಗುತ್ತಿತ್ತು ಎಂದು ಅವರು ಹೇಳಿದರು.

ಇದರಲ್ಲಿ ಯಾವುದೇ ಮುಖ್ಯವಾಹಿನಿಯ ಧಾರ್ಮಿಕ ಸಂಸ್ಥೆಗಳ ಒಳಗೊಳ್ಳುವಿಕೆ ಕಂಡುಬಂದಿಲ್ಲ. ಸಿಮಿ ಕಾರ್ಯಕರ್ತರಾಗಿದ್ದ ಆರೋಪಿಗಳು ಸಾರ್ವಜನಿಕರಿಂದ ದೂರ ಉಳಿದಿದ್ದರು ಎಂದೂ ಅವರು ಹೇಳಿದ್ದಾರೆ.

ಆಯೋಜಕರ ದೃಷ್ಟಿಯಲ್ಲಿ ಮುಸ್ಲಿಂ ಸಮುದಾಯದ ಜನರನ್ನು ಹಿಂಸಿಸಿದರೆ ಮತ್ತು ನಿಗ್ರಹಿಸಿದರೆ, ಅವರು ಅವರನ್ನು ರಕ್ಷಿಸಲು ಈ ತರಬೇತಿ ಪಡೆದವರು ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಆದರೆ, ಪೊಲೀಸ್​ ಅಧಿಕಾರಿ ಪಿಎಫ್​ಐ ವಕ್ತಾರರಂತೆ ಮಾತನಾಡಿದ್ದಾರೆ ಎಂದು ಆಕ್ರೋಶಗೊಂಡ ಬಿಜೆಪಿ ನಾಯಕರು ಪೊಲೀಸ್​ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅವರು ಧಿಲ್ಲೋನ್​ ಅವರನ್ನು ಎಸ್​ಎಸ್​ಪಿ ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿದ್ದಾರೆ.

ಬಿಜೆಪಿ ಶಾಸಕ ಹರೀಶ್​ ಭೂಷಣ್​ ಠಾಕೂರ್​, ಎಸ್​ಎಸ್​ಪಿಯನ್ನು ಆರ್​ಎಸ್​ಎಸ್​ನೊಂದಿಗೆ ಪಿಎಫ್​ಐ ಅನ್ನು ಹೋಲಿಸಿದ್ದಕ್ಕಾಗಿ ‘ಮಾನಸಿಕ ದಿವಾಳಿ’ ಎಂದು ಹಣೆಪಟ್ಟಿ ಕಟ್ಟಿದ್ದಾರೆ. ಈ ಕೂಡಲೇ ಧಿಲ್ಲೋನ್​ರಿಂದ ತಕ್ಷಣ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಕ್ಷಮೆ ಯಾಚಿಸದಿದ್ದರೆ ಅಧಿಕಾರಿಯನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಆ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿರುವ ಆರ್​ಜೆಡಿ ಎಸ್​ಎಸ್​ಪಿಯನ್ನು ಬೆಂಬಲಿಸಿ ಟ್ವೀಟ್​ ಮಾಡಿದೆ. ಪಾಟ್ನಾದ ಹಿರಿಯ ಪೊಲೀಸ್​ ಅಧೀಕ್ಷಕರು ಸರಿಯಾಗಿ ಹೇಳಿದ್ದಾರೆ. ಮತ್ತು ಕೆಲವು ಪ್ರದೇಶಗಳಲ್ಲಿ, ಅವರು ಗಲಭೆಗಳು, ಗುಂಪು ಹತ್ಯೆಗಳು ಮತ್ತು ಇತರ ಸಾಮಾಜಿಕ ಸಾಮರಸ್ಯದ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಾರೆ ಎಂದು ಟೀಕಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...