alex Certify ವೃದ್ಧಾಪ್ಯ, ವಿಧವಾ ವೇತನ ಸೇರಿ ವಿವಿಧ ಪಿಂಚಣಿದಾರರಿಗೆ ಮುಖ್ಯ ಮಾಹಿತಿ: ವಾರ್ಷಿಕ ಪರಿಶೀಲನೆ ಮಾಡಿಸದಿದ್ರೆ ಪಿಂಚಣಿ ಸ್ಥಗಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧಾಪ್ಯ, ವಿಧವಾ ವೇತನ ಸೇರಿ ವಿವಿಧ ಪಿಂಚಣಿದಾರರಿಗೆ ಮುಖ್ಯ ಮಾಹಿತಿ: ವಾರ್ಷಿಕ ಪರಿಶೀಲನೆ ಮಾಡಿಸದಿದ್ರೆ ಪಿಂಚಣಿ ಸ್ಥಗಿತ

ವಿಜಯನಗರ(ಹೊಸಪೇಟೆ): ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಹಾಗೂ ಸಂಧ್ಯಾ ಸುರಕ್ಷಾ ವೇತನದಲ್ಲಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಕಂದಾಯ ಇಲಾಖೆ ಸಿಬ್ಬಂದಿಯವರಲ್ಲಿ ಮೂಲ ಆಧಾರ್, ಬ್ಯಾಂಕ್ ಪಾಸ್ ಬುಕ್ ನೊಂದಿಗೆ ಖುದ್ದಾಗಿ ಹಾಜರಾಗಿ ತಮ್ಮ ಪಿಂಚಣಿಯ ವಾರ್ಷಿಕ ಪರಿಶೀಲನೆ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಿದೆ.

ಹೊಸಪೇಟೆ ತಹಶೀಲ್ದಾರರ ಕಚೇರಿ, ಕಮಲಾಪುರ ನಾಡಕಚೇರಿ, ಮರಿಯಮ್ಮನಹಳ್ಳಿ ನಾಡಕಚೇರಿಗಳಿಗೆ ಪಿಂಚಣಿದಾರರು ಖುದ್ದಾಗಿ ಹೋಗಿ ವಾರ್ಷಿಕ ಪರಿಶೀಲನೆಯನ್ನು ಮಾಡಿಸಬೇಕು. ತಪ್ಪಿದಲ್ಲಿ ಪಿಂಚಣಿ ಯೋಜನೆಯಲ್ಲಿ ಆಸಕ್ತಿ ಇಲ್ಲವೆಂದು ಪರಿಗಣಿಸಿ ಡಿ.30ರ ನಂತರ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ತಾತ್ಕಾಲಿಕವಾಗಿ ಸ್ಥಗಿತಗೊಂಡ ಪ್ರಕರಣಗಳಲ್ಲಿ ಫಲಾನುಭವಿಗಳು ತಮ್ಮ ಅಧಾರ್ ಮತ್ತು ಬ್ಯಾಂಕ್/ಅಂಚೆ ಖಾತೆ ವಿವರಗಳನ್ನು ಸಲ್ಲಿಸಿದ ನಂತರ ಮರುಚಾಲನೆಗೊಳಿಸಲಾಗುವುದು ಎಂದು ಹೊಸಪೇಟೆ ಗ್ರೇಡ್-2 ತಹಶೀಲ್ದಾರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...