alex Certify ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಮಾಜಿ ಶಾಸಕ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಮಾಜಿ ಶಾಸಕ ವಶಕ್ಕೆ

ತಿರುವನಂತಪುರಂ: ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ ಮಾಜಿ ಶಾಸಕ ಪಿ.ಸಿ. ಜಾರ್ಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಸ್ಲಿಂ ಮಾಲೀಕತ್ವದ ರೆಸ್ಟೋರೆಂಟ್ ಗಳಲ್ಲಿ ಕೊಡುವ ಚಹಾದಲ್ಲಿ ಬಂಜೆತನ ಬರುವ ಹನಿ ಹಾಕಲಾಗುತ್ತದೆ ಎಂಬುದು ಸೇರಿದಂತೆ ಅನೇಕ ವಿವಾದಿತ ಹೇಳಿಕೆಗಳನ್ನು ಪಿ.ಸಿ. ಜಾರ್ಜ್ ನೀಡಿದ್ದರು. ಮುಸ್ಲಿಮರ ರೆಸ್ಟೊರೆಂಟ್ ವ್ಯಾಪಾರ ಸ್ಥಳಗಳಿಗೆ ಹಿಂದೂಗಳು ಹೋಗಬಾರದು ಎಂದು ಹೇಳಿದ್ದರು.

ಅವರ ಹೇಳಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅನೇಕ ಸಂಘಟನೆಗಳು ಜಾರ್ಜ್ ವಿರುದ್ಧ ದೂರು ದಾಖಲಿಸಿ ಕೋಮು ಸೌಹಾರ್ದತೆ ಕದಡಲು ಮುಂದಾಗಿರುವ ಪಿ.ಸಿ. ಜಾರ್ಜ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದರು. ತಿರುವನಂತಪುರಂ ಪೋರ್ಟ್ ಠಾಣೆ ಪೊಲೀಸರು ಜಾರ್ಜ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...