alex Certify ಗೆಳತಿಯನ್ನು​ ಭೇಟಿಯಾಗಲು ಬಂದಿದ್ದ ಅತಿಕ್​ ಅಹ್ಮದ್​ ಸಂಬಂಧಿ ಸದ್ದಾಂ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯನ್ನು​ ಭೇಟಿಯಾಗಲು ಬಂದಿದ್ದ ಅತಿಕ್​ ಅಹ್ಮದ್​ ಸಂಬಂಧಿ ಸದ್ದಾಂ ಅರೆಸ್ಟ್

ಹತ್ಯೆಗೀಡಾದ ದರೋಡೆಕೋರ ಹಾಗೂ ರಾಜಕಾರಣಿ ಅತಿಕ್​ ಅಹ್ಮದ್​ ಬಾವ ಸದ್ದಾಂನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಗುರುವಾರದಂದು ದೆಹಲಿಯಲ್ಲಿ ಬಂಧಿಸಿದೆ.

ಹತ್ಯೆಗೀಡಾದ ಬಿಎಸ್ಪಿ ಶಾಸಕ ರಾಜುಪಾಲ್​ ಸಹೋದರ ಉಮೇಶ್​ ಪಾಲ್​ ಹತ್ಯೆ ಬಳಿಕ ಈತ ಪರಾರಿಯಾಗಿದ್ದ ಎನ್ನಲಾಗಿದೆ. ಹತ್ಯೆ ಬಳಿಕ ದುಬೈಗೆ ಹಾರಿದ್ದ ಸದ್ದಾಂ ಕೆಲವೇ ತಿಂಗಳುಗಳ ಹಿಂದೆ ಭಾರತಕ್ಕೆ ವಾಪಸ್ಸಾಗಿದ್ದ. ಇದಾದ ಬಳಿಕ ಸದ್ದಾಂ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ.

ಸದ್ದಾಂ, ಅತಿಕ್​ ಅಹ್ಮದ್​ ಗ್ಯಾಂಗ್​ನೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಕ್ರಮ ಭೂಕಬಳಿಕೆ ಹಾಗೂ ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಬರೇಲಿ ಜೈಲಿನಲ್ಲಿ ಅತೀಕ್​ ಅಹ್ಮದ್​​ ಜೈಲಿನಲ್ಲಿದ್ದಾಗ ಸದ್ದಾಂರನ್ನು ಭೇಟಿಯಾಗುತ್ತಿದ್ದ ಎಂದು ಹೇಳಲಾಗಿದೆ.

ಉಮೇಶ್​ ಪಾಲ್​ ಕೊಲೆ ಪ್ರಕರಣದ ಬಳಿಕ ಸದ್ದಾಂ ಭೂಗತನಾಗಿದ್ದ. ಪೊಲೀಸರ ಪ್ರಕಾರ, ತನ್ನ ಗುರುತನ್ನ ಬದಲಾಯಿಸಿಕೊಂಡಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳೋಕೆ ಈತ ಕರ್ನಾಟಕ, ಮುಂಬೈ ಹಾಗೂ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಸದ್ದಾಂ ದೆಹಲಿಯಲ್ಲಿ ತನ್ನ ಗೆಳತಿ ಅನಮ್​​ನನ್ನು ಭೇಟಿಯಾಗಲು ಹೊರಟಿದ್ದಾಗ ಉತ್ತರ ಪ್ರದೇಶದ ಎಸ್​ಟಿಎಫ್​​​ನಿಂದ ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...