alex Certify ʼಆದಿಪುರುಷ್ʼ ಸಿನಿಮಾದ ಡೈಲಾಗ್ಸ್ ​ಗೆ ಕ್ಷಮೆಯಾಚಿಸಿದ ಮನೋಜ್​ ಮುಂತಾಶಿರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆದಿಪುರುಷ್ʼ ಸಿನಿಮಾದ ಡೈಲಾಗ್ಸ್ ​ಗೆ ಕ್ಷಮೆಯಾಚಿಸಿದ ಮನೋಜ್​ ಮುಂತಾಶಿರ್

ಆದಿಪುರುಷ್​ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ಆರಂಭವಾದ ದಿನದಿಂದಲೂ ಭಾರೀ ವಿರೋಧವನ್ನು ಎದುರಿಸಿದೆ. ಕಳಪೆ ವಿಎಫ್​ಎಕ್ಸ್​ ಹಾಗೂ ಸಂಭಾಷಣೆಯ ಬಗ್ಗೆ ಪ್ರೇಕ್ಷಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ಆದಿಪುರುಷ್​ ಸಿನಿಮಾದ ಸಂಭಾಷಣೆಯ ಬಗ್ಗೆ ಉಂಟಾದ ಟೀಕೆಗಳ ವಿಚಾರವಾಗಿ ಮಾತನಾಡಿದ ಸಿನಿಮಾದ ಸಂಭಾಷಣಕಾರ ಮನೋಜ್​ ಮುಂತಾಶಿರ್​ ಪ್ರೇಕ್ಷಕರ ಭಾವನೆಗೆ ಧಕ್ಕೆಯುಂಟು ಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.

ಆದಿಪುರುಷ್​ ಸಿನಿಮಾದ ಡೈಲಾಗ್ಸ್​ ಬರೆದಿರುವ ಮನೋಜ್​ ಈಗಾಗಲೇ ಸಾಕಷ್ಟು ವಿರೋಧ ಮತ್ತು ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾರೆ. ಒಂದು ವರ್ಗದ ಪ್ರೇಕ್ಷಕರು ಸಿನಿಮಾದ ಸಂಭಾಷಣೆಯನ್ನು ಕಟ್ಟುನಿಟ್ಟಾಗಿ ವಿರೋಧಿಸಿದ್ದಾರೆ. ಹೀಗಾಗಿ ನಾವು ಅದನ್ನು ಬದಲಾಯಿಸಿದ್ದೇವೆ ಕೂಡ. ಆದರೂ ಜನರ ಭಾವನೆಗೆ ನೋವುಂಟು ಮಾಡಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆಂದು ಮನೋಜ್​ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಆದಿಪುರುಷ್​ ಸಿನಿಮಾದಿಂದ ಜನರ ಭಾವನೆಗಳಿಗೆ ನೋವುಂಟಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಕೈ ಮುಗಿದು ನಾನು ಬೇಷರತ್​ ಕ್ಷಮೆಯಾಚಿಸುತ್ತಿದ್ದೇನೆ. ಪ್ರಭು ಭಜರಂಗಬಲಿ ನಮ್ಮನ್ನು ಒಗ್ಗೂಡಿಸಲಿ ಹಾಗೂ ನಮ್ಮ ಪವಿತ್ರ ಸನಾತನ ಧರ್ಮ ಹಾಗೂ ರಾಷ್ಟ್ರ ಸೇವೆ ಮಾಡುವ ಶಕ್ತಿಯನ್ನು ನಮಗೆ ನೀಡಲಿ ಎಂದು ಮನೋಜ್​ ಬರೆದಿದ್ದಾರೆ.

ಈ ಹಿಂದೆ ಮಾಧ್ಯಮಗಳಿಗೆ ಸಂದರ್ಶನ ನೀಡುವ ವೇಳೆ ಆದಿಪುರುಷ್​ ಸಿನಿಮಾದ ಡೈಲಾಗ್​​ಗಳನ್ನು ಸಮರ್ಥಿಸಿಕೊಂಡಿದ್ದ ಮನೋಜ್​, ಹನುಮಂತ ದೇವರೇ ಅಲ್ಲ. ಆತ ಭಗವಾನ್​ ರಾಮನ ಭಕ್ತರಲ್ಲಿ ಒಬ್ಬ ಎಂದು ವಾದಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...