alex Certify ಸಂಕಷ್ಟದಲ್ಲಿರುವ ಜನತೆ ನೆರವಿಗೆ ಧಾವಿಸಿದ ಒಲಂಪಿಕ್‌ ಪದಕ ವಿಜೇತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟದಲ್ಲಿರುವ ಜನತೆ ನೆರವಿಗೆ ಧಾವಿಸಿದ ಒಲಂಪಿಕ್‌ ಪದಕ ವಿಜೇತ

ದೆಹಲಿ: ಟೋಕಿಯೋ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ, ಅಂತಾರಾಷ್ಟ್ರೀಯ ಮಾಜಿ ಪವರ್ ಲಿಫ್ಟಿಂಗ್ ಚಾಂಪಿಯನ್ ಗೌರವ್ ಶರ್ಮಾ ಅವರು ದೆಹಲಿಯಲ್ಲಿ ಅಗತ್ಯವಿರುವವರಿಗೆ ಆಹಾರವನ್ನು ವಿತರಿಸಿದ್ದಾರೆ.

ಬಜರಂಗ್ ಪುನಿಯಾ ಹಾಗೂ ಗೌರವ್ ಶರ್ಮಾ ಅವರು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿನ ಅಗತ್ಯವಿರುವ ಜನರಿಗೆ 1000 ಆಹಾರ ಪ್ಯಾಕೆಟ್ ಮತ್ತು ನೀರಿನ ಬಾಟಲಿಗಳನ್ನು ವಿತರಿಸಿದ್ದಾರೆ.

1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂದರ್ಶನ ಇಲ್ಲ, ಲಿಖಿತ ಪರೀಕ್ಷೆಯೇ ಮಾನದಂಡ,: ವಂಚನೆಗೆ ಒಳಗಾಗಬೇಡಿ

ಗೌರವ್ ಕಳೆದ ಒಂದು ವರ್ಷದಿಂದ ದಿನನಿತ್ಯ ಈ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ತಿಳಿದೆ. ಹೀಗಾಗಿ ತಾನೂ ಅವರ ಜೊತೆ ಸೇವೆಗೆ ಕೈಜೋಡಿಸಲು ನಿರ್ಧರಿಸಿದ್ದಾಗಿ ಬಜರಂಗ್ ತಿಳಿಸಿದ್ದಾರೆ.

ಇನ್ನು “ಕಳೆದ ವರ್ಷ ಲಾಕ್‌ ಡೌನ್ ಹೇರಿದ ನಂತರ ದೆಹಲಿಯಲ್ಲಿ ಜನರ ಸೇವೆ ಮಾಡಲು ನಿರ್ಧರಿಸಿದೆ. ಪ್ರತಿದಿನ ಸುಮಾರು 1000-1100 ಆಹಾರ ಪ್ಯಾಕೆಟ್‌ಗಳನ್ನು ನೀಡಲಾಗುತ್ತದೆ. ಜನರಿಗೆ ನೀರಿನ ಬಾಟಲಿಗಳು, ಸ್ಯಾನಿಟೈಸರ್ ಮತ್ತು ಫೇಸ್ ಮಾಸ್ಕ್ ಕೂಡ ನೀಡಲಾಗುತ್ತದೆ. ಸಂಕಷ್ಟದಲ್ಲಿರುವ ಜನರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ” ಎಂದು ಗೌರವ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...