alex Certify 2,000 ರೂ. ನೋಟು ಬ್ಯಾನ್ ಕಪ್ಪುಹಣಕ್ಕೆ ದೊಡ್ಡ ಹೊಡೆತ: ಪ್ರಧಾನಿ ಮೋದಿ ಮಾಜಿ ಕಾರ್ಯದರ್ಶಿ ನೃಪೇಂದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2,000 ರೂ. ನೋಟು ಬ್ಯಾನ್ ಕಪ್ಪುಹಣಕ್ಕೆ ದೊಡ್ಡ ಹೊಡೆತ: ಪ್ರಧಾನಿ ಮೋದಿ ಮಾಜಿ ಕಾರ್ಯದರ್ಶಿ ನೃಪೇಂದ್ರ

ನವದೆಹಲಿ: ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ ನ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಶ್ಲಾಘಿಸಿದ್ದಾರೆ.

2,000 ರೂಪಾಯಿ ನೋಟುಗಳ ಹಿಂಪಡೆಯುವಿಕೆಯಿಂದ ಕಪ್ಪುಹಣ ಮತ್ತು ತೆರಿಗೆ ವಂಚನೆಗೆ ಕಡಿವಾಣ ಹಾಕುವ ಪ್ರಧಾನಿಯವರ ಸಂಕಲ್ಪ ಬಲಗೊಳ್ಳಲಿದೆ. ಪ್ರಧಾನಿಯವರು ಯಾವಾಗಲೂ ಕಪ್ಪು ಹಣದ ಸಮಾನಾಂತರ ಆರ್ಥಿಕತೆಯನ್ನು ಉತ್ತಮ ಆರ್ಥಿಕ ನಿರ್ವಹಣೆಗೆ ಶಾಪವಾಗಿ ನೋಡಿದ್ದಾರೆ. ಮೋದಿ ಅವರ ದೂರದೃಷ್ಟಿಯ ಕ್ರಮ ಇದಾಗಿದೆ ಎಂದು ಮಿಶ್ರಾ ಹೇಳಿದರು.

ಮೇ 19 ರಂದು ಆರ್‌ಬಿಐ ಹೇಳಿಕೆ ನೀಡಿದ್ದು, ಪರಿಶೀಲನೆಯ ಆಧಾರದ ಮೇಲೆ ಚಲಾವಣೆಯಲ್ಲಿರುವ 2,000 ರೂ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದೆ. ಆದಾಗ್ಯೂ, ಬ್ಯಾಂಕ್ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.

ಭಾರತೀಯ ಕರೆನ್ಸಿಯಲ್ಲಿನ ಅತ್ಯಧಿಕ ಮುಖಬೆಲೆಯ ಹಿಂಪಡೆಯುವಿಕೆ ನೋಟು ಅಮಾನ್ಯೀಕರಣಕ್ಕಿಂತ ಭಿನ್ನವಾಗಿದೆ ಮತ್ತು ಈ ಕ್ರಮವು ಸಾಮಾನ್ಯ ನಾಗರಿಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಮಿಶ್ರಾ ಹೇಳಿದ್ದಾರೆ. ಇದು ನೋಟು ಅಮಾನ್ಯೀಕರಣವೇ ಅಲ್ಲ. ವಾಸ್ತವವಾಗಿ, 2016 ರಲ್ಲಿ ನೋಟು ಅಮಾನ್ಯೀಕರಣದ ನಂತರ 2,000 ರೂಪಾಯಿ ನೋಟುಗಳನ್ನು ವಿತರಿಸಲು ಪ್ರಧಾನಿ ಮೋದಿ ಉತ್ಸುಕರಾಗಿರಲಿಲ್ಲ. ಸಾಮಾನ್ಯ ಜನರು 100 ರೂ. ಮತ್ತು 500 ರೂ. ಬಳಸುತ್ತಾರೆ. 2,000 ರೂ. ಬಳಸಲ್ಲ. ಆದ್ದರಿಂದ ಅವರ ಪರಿಣಾಮ ಬೀರುವುದಿಲ್ಲ.

ಈ ಕ್ರಮವು ಕಪ್ಪುಹಣವನ್ನು ತಡೆಯಲು ಸಹಾಯ ಮಾಡುತ್ತದೆ. 2,000 ರೂ. ನೋಟುಗಳನ್ನು ಹೊಂದಿರುವವರು ಚಿಂತಿಸಬೇಕಾಗಿಲ್ಲ. ನಿಮ್ಮ ಖಾತೆಗೆ ಹಣ ಜಮಾ ಮಾಡಬಹುದು, ವಿನಿಮಯ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಮಿಶ್ರಾ ಅವರು 2014 ಮತ್ತು 2019 ರ ನಡುವೆ ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕಪ್ಪು ಹಣ ಮತ್ತು ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ತಡೆಯುವ ಪ್ರಯತ್ನದಲ್ಲಿ ನವೆಂಬರ್ 2016 ರಲ್ಲಿ 1,000 ಮತ್ತು 500(ಹಳೆಯ ಸರಣಿ) ನೋಟುಗಳ ಕಾನೂನುಬದ್ಧ ಟೆಂಡರ್ ಅನ್ನು ರದ್ದುಗೊಳಿಸುವುದಾಗಿ ಕೇಂದ್ರವು ಘೋಷಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...