alex Certify ಸಿಹಿ ತಿನಿಸು ಮಾತ್ರವಲ್ಲ, ಸಕ್ಕರೆ ಕಾಯಿಲೆ ಬರಲು ಕಾರಣವಾಗುತ್ತೆ ಈ ಸಂಗತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಹಿ ತಿನಿಸು ಮಾತ್ರವಲ್ಲ, ಸಕ್ಕರೆ ಕಾಯಿಲೆ ಬರಲು ಕಾರಣವಾಗುತ್ತೆ ಈ ಸಂಗತಿ….!

ಸಕ್ಕರೆ ಕಾಯಿಲೆ ಬಹಳ ವೇಗವಾಗಿ ಹರಡುತ್ತಿದೆ. ಭಾರತವೊಂದರಲ್ಲೇ ಸುಮಾರು 77 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಹೆಚ್ಚು ಸಿಹಿ ತಿನ್ನುವುದರಿಂದ ಮಧುಮೇಹ ಬರುತ್ತದೆ ಎಂಬುದು ಬಹುತೇಕರ ಭಾವನೆ. ಆದರೆ ಈ ವಿಚಾರದಲ್ಲಿ ಆರೋಗ್ಯ ತಜ್ಞರು ಹೇಳುವುದೇ ಬೇರೆ. ಹೆಚ್ಚು ಸಿಹಿ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುವುದಿಲ್ಲ. ಇದು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆ. ವಾಸ್ತವವಾಗಿ ಮಧುಮೇಹವು ದೀರ್ಘಕಾಲದ ರೋಗವಾಗಿದ್ದು, ಈ ಸಮಯದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಸಿಹಿ ತಿನ್ನುವುದು ಸಕ್ಕರೆ ಕಾಯಿಲೆಗೆ ಒಂದು ಕಾರಣವಾಗಿರಬಹುದು, ಆದರೆ ಅದೊಂದೇ ಕಾರಣವಲ್ಲ. ಸಿಹಿತಿಂಡಿಗಳನ್ನು ಹೊರತುಪಡಿಸಿ ಮಧುಮೇಹಕ್ಕೆ ಇತರ ಕಾರಣಗಳು ಯಾವುವು ಎಂದು ತಿಳಿಯೋಣ.

ಸಕ್ಕರೆ ಕಾಯಿಲೆಗೆ ಕಾರಣಗಳು

ಬೊಜ್ಜು ಮತ್ತು ಅಧಿಕ ಬಿಪಿ – ಮಧುಮೇಹವನ್ನು ಆಹ್ವಾನಿಸಲು ಬೊಜ್ಜು ಪ್ರಮುಖ ಕಾರಣವಾಗಿದೆ. ತೆಳ್ಳಗಿನ ಜನರಿಗಿಂತ ಬೊಜ್ಜಿನ ಸಮಸ್ಯೆ ಇರುವವರಲ್ಲಿ ಮಧುಮೇಹದ ಅಪಾಯ ಹೆಚ್ಚು. ದೇಹದಲ್ಲಿ ತುಂಬಾ ಕೊಬ್ಬು ಸಂಗ್ರಹವಾದಾಗ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ. ಪರಿಣಾಮ ಸಕ್ಕರೆ ಕಾಯಿಲೆಯ ಅಪಾಯ ಹೆಚ್ಚುತ್ತದೆ. ಅದೇ ರೀತಿ ಅಧಿಕ ಬಿಪಿ ಕೂಡ ಮಧುಮೇಹಕ್ಕೆ ಕಾರಣವೆಂದು ಪರಿಗಣಿಸಲಾಗಿದೆ.

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ, ರಕ್ತದೊತ್ತಡ ಯಾವಾಗಲೂ ಅಧಿಕವಾಗಿರುತ್ತದೆ. ಅವರಲ್ಲಿ ಸಕ್ಕರೆ ಕಾಯಿಲೆಯ ಅಪಾಯ ಹೆಚ್ಚಾಗಿರುತ್ತದೆ. ವ್ಯಾಯಾಮದ ಕೊರತೆ ಕೂಡ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ನಾವು ದೈಹಿಕ ಚಟುವಟಿಕೆಯನ್ನು ಮಾಡದಿದ್ದಾಗ ದೇಹದಲ್ಲಿ ಇನ್ಸುಲಿನ್ ಪ್ರತಿರೋಧವು ಪರಿಣಾಮ ಬೀರುತ್ತದೆ. ಸಕ್ಕರೆ ಕಾಯಿಲೆಯ ಸಾಧ್ಯತೆ ಹೆಚ್ಚಾಗಿರುತ್ತದೆ.

ಆನುವಂಶಿಕ ಕಾರಣಗಳು – ಮಧುಮೇಹಕ್ಕೆ ಆನುವಂಶಿಕ ಕಾರಣಗಳೂ ಇವೆ. ಕುಟುಂಬದಲ್ಲಿ ಯಾರಿಗಾದರೂ ಈ ಕಾಯಿಲೆ ಇದ್ದಲ್ಲಿ ಇತರರಿಗೂ ಬರುವ ಸಾಧ್ಯತೆ ಇರುತ್ತದೆ. ಇದಲ್ಲದೆ ಹಾರ್ಮೋನುಗಳ ಅಸಮತೋಲನ ಕೂಡ ಸಕ್ಕರೆ ಕಾಯಿಲೆಗೆ ಮುಖ್ಯ ಕಾರಣವೆಂದು ಪರಿಗಣಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...