alex Certify ಕಟ್ಟಡ ಉದ್ಘಾಟನೆ ವೇಳೆ ಸಿಗಲಿಲ್ಲ ಕತ್ತರಿ……! ಸಿಎಂ ಮಾಡಿದ್ದೇನು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಟ್ಟಡ ಉದ್ಘಾಟನೆ ವೇಳೆ ಸಿಗಲಿಲ್ಲ ಕತ್ತರಿ……! ಸಿಎಂ ಮಾಡಿದ್ದೇನು ಗೊತ್ತಾ…..?

ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​​ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಒಂದರಲ್ಲಿ ಕತ್ತರಿ ಸಿಗದೇ ಪರದಾಡಿದ ಸನ್ನಿವೇಶ ನಡೆದಿದೆ.

ಸಮುದಾಯ ವಸತಿ ಕಟ್ಟಡ ಉದ್ಘಾಟನೆ ಮಾಡಲು ಆಗಮಿಸಿದ ಸಿಎಂಗೆ ಕತ್ತರಿ ನೀಡುವಲ್ಲಿ ಕಾರ್ಯಕ್ರಮದ ಆಯೋಜಕರು ವಿಫಲರಾದ ಹಿನ್ನೆಲೆ ರಿಬ್ಬನ್​ ಹರಿದು ಕಟ್ಟಡದ ಒಳಕ್ಕೆ ಹೋಗಿದ್ದಾರೆ.

ಸಿಎಂ ಜೊತೆ ಸಾಕಷ್ಟು ಮಂದಿ ನಿಂತಿರೋದನ್ನೂ ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ. ಎಲ್ಲರೂ ಕತ್ತರಿಗಾಗಿ ಹುಡುಕಾಟ ನಡೆಸಿದ್ದಾರೆ. ಕೆಲ ಸೆಕೆಂಡ್​ಗಳ ಕಾಲ ಕತ್ತರಿಗಾಗಿ ಕಾದ ಕೆ.ಸಿ. ರಾವ್​ ಬಳಿಕ ತಮ್ಮ ಕೈನಿಂದಲೇ ರಿಬ್ಬನ್​ ಎಳೆದು ಉದ್ಘಾಟನೆ ಮಾಡಿದ್ದಾರೆ.

ರಾಜಣ್ಣ ಸಿಕಿಲ್ಲಾ ಜಿಲ್ಲೆಯ ಮಂಡೇಪಲ್ಲಿ ಗ್ರಾಮದಲ್ಲಿ ಜುಲೈ 4ರಂದು ನಡೆದ ಘಟನೆ ಇದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...