alex Certify BIG BREAKING: ರಾಜಕೀಯ ಜೀವನಕ್ಕೆ ಅಧಿಕೃತ ʼಗುಡ್ ​ಬೈʼ ಹೇಳಿದ ರಜನಿಕಾಂತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರಾಜಕೀಯ ಜೀವನಕ್ಕೆ ಅಧಿಕೃತ ʼಗುಡ್ ​ಬೈʼ ಹೇಳಿದ ರಜನಿಕಾಂತ್

ಆರೋಗ್ಯ ಕಾರಣದಿಂದಾಗಿ ರಾಜಕೀಯ ಜೀವನದಿಂದ ದೂರ ಸರಿದಿದ್ದ ಸೂಪರ್​ ಸ್ಟಾರ್​ ರಜನಿಕಾಂತ್​ ಇದೀಗ ತಮ್ಮ ರಾಜಕೀಯ ಜೀವನದ ಬಗ್ಗೆ ಅಧಿಕೃತ ಘೋಷಣೆಯನ್ನ ಹೊರಡಿಸಿದ್ದಾರೆ. ಇನ್ನೆಂದೂ ತಾವು ರಾಜಕೀಯ ಜೀವನಕ್ಕೆ ಮರಳೋದಿಲ್ಲ ಎಂಬ ಅಧಿಕೃತ ಹೇಳಿಕೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ರಜಿನಿಕಾಂತ್​ ಸ್ಥಾಪಿತ ಮಕ್ಕಳ್​ ಮಂಡ್ರಮ್​ ಪಕ್ಷವನ್ನ ರಜನಿಕಾಂತ್​ ವಿಸರ್ಜನೆ ಮಾಡಿದ್ದಾರೆ. ಈ ಪಕ್ಷವು ಇನ್ಮುಂದೆ ಫ್ಯಾನ್ಸ್​ ಕ್ಲಬ್​ ಆಗಿ ಮುಂದುವರಿಯಲಿದೆ. ನಾನು ಮತ್ತೆ ರಾಜಕೀಯಕ್ಕೆ ಎಂಟ್ರಿ ಕೋಡೋದಿಲ್ಲ ಎಂದು ತಲೈವಾ ಸ್ಪಷ್ಟನೆ ನೀಡಿದ್ದಾರೆ .

ಕಳೆದ ವರ್ಷ ಡಿಸೆಂಬರ್ ಮೂರನೇ ತಾರೀಖಿನಂದು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ 2021 ಜನವರಿಯಲ್ಲಿ ತಮ್ಮ ಪಕ್ಷವನ್ನ ಆರಂಭಿಸೋದಾಗಿ ಹೇಳಿಕೆ ನೀಡಿದ್ದರು. ಆದರೆ ಡಿಸೆಂಬರ್​ ಕೊನೆಯವಾರದಲ್ಲೇ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದ ರಜನಿಕಾಂತ್​ ರಾಜಕೀಯಕ್ಕೆ ಪ್ರವೇಶಿಸೋದಿಲ್ಲ ಎಂದು ಹೇಳಿಕೆ ನೀಡಿದ್ದರು. ರಜನಿಕಾಂತ್​​ರ ಈ ಹೇಳಿಕೆ ಬಳಿಕ ಮಕ್ಕಳ್​ ಮಂಡ್ರಂ ಪಕ್ಷದ ಅನೇಕರು ಡಿಎಂಕೆ ಸೇರಿದಂತೆ ವಿವಿಧ ಪಕ್ಷಕ್ಕೆ ಸೇರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...