alex Certify 10 ಲಕ್ಷ ಕುಕ್ಕರ್ ಗೆ ಆರ್ಡರ್ ಮಾಡಿದ್ದಾರೆ, ಈಗಾಗಲೇ 4-5 ಲಕ್ಷ ಕುಕ್ಕರ್ ಹಂಚಿದ್ದಾರೆ: ನಿಖಿಲ್ ಕುಮಾರಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ಲಕ್ಷ ಕುಕ್ಕರ್ ಗೆ ಆರ್ಡರ್ ಮಾಡಿದ್ದಾರೆ, ಈಗಾಗಲೇ 4-5 ಲಕ್ಷ ಕುಕ್ಕರ್ ಹಂಚಿದ್ದಾರೆ: ನಿಖಿಲ್ ಕುಮಾರಸ್ವಾಮಿ

ರಾಮನಗರ: ಕಳೆದ 20 ದಿನಗಳಲ್ಲಿ ಸುಮಾರು 10 ಲಕ್ಷ ಕುಕ್ಕರ್ ಆರ್ಡರ್ ಮಾಡಿದ್ದಾರೆ. ಈಗಾಗಲೇ 4-5 ಲಕ್ಷ ಕುಕ್ಕರ್ ಗಳನ್ನು ಯಶಸ್ವಿಯಾಗಿ ಹಂಚಿಕೆ ಮಾಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ವಿರುದ್ಧ ಆರೋಪ ಮಾಡಿದ ನಿಖಿಲ್ ಕುಮಾರಸ್ವಾಮಿ, ಮೊನ್ನೆ ಸೀರೆ, ತವಾಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕಾಂಗ್ರೆಸ್ ನವರು ಮತದಾರರಿಗೆ ಆಮಿಷವೊಡ್ಡಿ ಚುನಾವಣೆ ನಡೆಸುತ್ತಿದ್ದಾರೆ. ಪ್ರಜ್ಞಾವಂತ ಮತದಾರರು ಯೋಚನೆ ಮಾಡಿ ಆಮಿಷಕ್ಕೆ ಬಲಿಯಾಗಬೇಡಿ ಎಂದು ಹೇಳಿದ್ದಾರೆ.

ಜೆಡಿಎಸ್ ಕಾರ್ಯಕರ್ತರು ಯಾರೂ ವೀಕ್ ಮೈಂಡ್ ನವರು ಅಲ್ಲ. ಒಂದಷ್ಟು ಜನ ಸವಲತ್ತು ಪಡೆದು ಜೆಡಿಎಸ್  ನಿಂದ ದೂರವಾಗಿರಬಹುದು. ಆದರೆ, ನಮ್ಮ ಪಕ್ಷದ ನಿಷ್ಠಾವಂತರು ಎಂದಿಗೂ ಪಕ್ಷ ಬಿಡಲ್ಲ, ಆಮಿಷಕ್ಕೆ ಒಳಗಾಗುವುದೂ ಇಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...