alex Certify ಕೊರೊನಾ ಮೂರನೇ ಅಲೆ ಗಂಭೀರತೆ ಬಗ್ಗೆ ಎಚ್ಚರಿಕೆ ನೀಡಿದ ಏಮ್ಸ್​ ನಿರ್ದೇಶಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮೂರನೇ ಅಲೆ ಗಂಭೀರತೆ ಬಗ್ಗೆ ಎಚ್ಚರಿಕೆ ನೀಡಿದ ಏಮ್ಸ್​ ನಿರ್ದೇಶಕ

ಕ್ಷೀಣಿಸುತ್ತಿರುವ ರೋಗ ನಿರೋಧಕ ಶಕ್ತಿ, ಲಾಕ್​​ಡೌನ್​ ಸಡಿಲಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೊರೊನಾ ಮೂರನೆ ಅಲೆಯು ಗಂಭೀರ ಪರಿಣಾಮವನ್ನ ಉಂಟು ಮಾಡಬಲ್ಲದು ಎಂದು ಏಮ್ಸ್ ನಿರ್ದೇಶಕ ರಂದೀಪ್​ ಗುಲೇರಿಯಾ ಕಳವಳ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಫೇಸ್​ ಮಾಸ್ಕ್​ ಬಳಕೆ, ಕೊರೊನಾ ಲಸಿಕೆ ತೆಗೆದುಕೊಳ್ಳುವುದು ಸೇರಿದಂತೆ ಕೊರೊನಾ ಮಾರ್ಗಸೂಚಿಗಳ ಸರಿಯಾದ ಪಾಲನೆಯಿಂದ ಮಾತ್ರ ಕೊರೊನಾ ಮೂರನೆ ಅಲೆಯಿಂದ ಪಾರಾಗಲು ಸಾಧ್ಯ ಎಂದು ರಂದೀಪ್​ ಗುಲೇರಿಯಾ ಹೇಳಿದ್ದಾರೆ.

ಕೊರೊನಾ ತಡೆಯಲು ಇರುವ ಎಲ್ಲಾ ನಿರ್ಬಂಧಗಳನ್ನ ತೆಗೆದು ಹಾಕಿದಲ್ಲಿ ರೋಗ ನಿರೋಧಕ ಶಕ್ತಿಯು ಕೊರೊನಾ ರೂಪಾಂತರಿಗಳ ವಿರುದ್ಧ ಹೋರಾಡಲು ಯಶಸ್ವಿಯಾಗದೇ ಹೋದರೆ ಕೊರೊನಾ ಮೂರನೇ ಅಲೆಯು ಎರಡನೆ ಅಲೆಗಿಂತಲೂ ಭೀಕರವಾಗಿ ಇರಲಿದೆ. ಹೀಗಾಗಿ ಕೊರೊನಾ ಮೂರನೇ ಅಲೆಯನ್ನ ನಿಯಂತ್ರಣದಲ್ಲಿ ಇಡಲು ಕೋವಿಡ್​ ಮಾರ್ಗಸೂಚಿಗಳ ಪಾಲನೆ ಅತ್ಯಗತ್ಯ ಎಂದು ಹೇಳಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...