alex Certify ಕ್ಯಾಡ್‌ ಬರಿ ಜಾಹೀರಾತಿನೊಂದಿಗೆ ನೆಟ್ಟಿಗರ ಹೃದಯ ಗೆದ್ದ ಶಾರುಖ್ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಡ್‌ ಬರಿ ಜಾಹೀರಾತಿನೊಂದಿಗೆ ನೆಟ್ಟಿಗರ ಹೃದಯ ಗೆದ್ದ ಶಾರುಖ್ ಖಾನ್

ಸಿಹಿ ತಿನಿಸುಗಳ ದಿಗ್ಗಜ ಕ್ಯಾಡ್‌ಬರೀಯ ಹೊಸ ಜಾಹೀರಾತಿನ ಮೂಲಕ ಬಾಲಿವುಡ್ ನಟ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ.

ಈ ದೀಪಾವಳಿ ವೇಳೆ ಸ್ಥಳೀಯ ಕಿರಾಣಿ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಿ ಎಂದು ಶಾರುಖ್ ಜಾಹೀರಾತಿನಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ತನ್ನ ಈ ಜಾಹೀರಾತಿನ ಜೊತೆಗೆ ಸ್ಥಳೀಯ ಕಿರಾಣಿ ಅಂಗಡಿ ಮಾಲೀಕರು ತಮ್ಮಲ್ಲಿರುವ ಉತ್ಪನ್ನಗಳು ಕೃತಕ ಬುದ್ಧಿಮತ್ತೆಯ ನೆರವಿನಿಂದ ಖುದ್ದು ಶಾರುಖ್‌ ರಿಂದಲೇ ಮಾರಾಟ ಮಾಡುವಂತೆ ಮಾಡಬಹುದಾಗಿದೆ.

ʼಕರ್ವಾಚೌತ್‌ʼ ಜಾಹೀರಾತಿನ ಮೂಲಕ ವಿವಾದಕ್ಕೆ ಸಿಲುಕಿದ ಡಾಬರ್

ದೀಪಾವಳಿ ಹಬ್ಬಕ್ಕೆ ಬಿಳಿಯ ಶೇರ್ವಾನಿಯೊಂದಿಗೆ ಸಿದ್ಧರಾಗಿರುವಂತೆ ಜಾಹೀರಾತಿನಲ್ಲಿ ಕಾಣುವ ಶಾರುಖ್ ತಮ್ಮ ಅಭಿಮಾನಿಗಳಿಗೆ ಖುಷಿ ಮೂಡಿಸಿದ್ದಾರೆ. ಈ ಆವಿಷ್ಕಾರೀ ಐಡಿಯಾ ಹಾಗೂ ಶಾರುಖ್‌ರ ಉಪಸ್ಥಿತಿ ಜಾಹೀರಾತನ್ನು ಸೂಪರ್‌ ಹಿಟ್ ಮಾಡಿದೆ.

ಈ ಮೂಲಕ ಸಣ್ಣ ಪುಟ್ಟ ವ್ಯಾಪಾರಿಗಳು ಖುದ್ದು ಶಾರುಖ್‌ ರನ್ನು ತಮ್ಮ ಪ್ರಚಾರ ರಾಯಭಾರಿಯನ್ನಾಗಿ ಮಾಡಿಕೊಳ್ಳಬಹುದಾಗಿದೆ. ಆದರೆ ಕೆಲವರು ಈ ಜಾಹೀರಾತಿಗೆ ಅಪಸ್ವರ ಎತ್ತಿದ್ದು, ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿರುವ ಮಗನ ರಕ್ಷಣೆಗೆ ಶಾರುಖ್ ಮುಂದಾಗಿದ್ದು, ಅವರ ಆಯ್ಕೆ ಸೂಕ್ತವಲ್ಲವೆಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...