alex Certify ದೇವೇಂದ್ರ ಫಡ್ನವಿಸ್​ ವಿರುದ್ಧ ಹೊಸ ಬಾಂಬ್ ಸಿಡಿಸಿದ ನವಾಬ್​ ಮಲ್ಲಿಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವೇಂದ್ರ ಫಡ್ನವಿಸ್​ ವಿರುದ್ಧ ಹೊಸ ಬಾಂಬ್ ಸಿಡಿಸಿದ ನವಾಬ್​ ಮಲ್ಲಿಕ್​..!

ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ಹಾಗೂ ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​ ನಡುವೆ ಆರೋಪ – ಪ್ರತ್ಯಾರೋಪಗಳ ಸುರಿಮಳೆ ಮುಗಿಯುವಂತೆ ಕಾಣುತ್ತಿಲ್ಲ. ದೇವೇಂದ್ರ ಫಡ್ನವಿಸ್​​ ಭೂಗತ ಲೋಕದ ಜೊತೆ ನಂಟು ಹೊಂದಿದ್ದಾರೆ ಎಂದು ನವಾಬ್​ ಮಲ್ಲಿಕ್​ ಆರೋಪಿಸಿದ್ದಾರೆ.‌

ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್​​​ ಸಮೀರ್​ ವಾಂಖೆಡೆಯನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ನವಾಬ್​ ಮಲ್ಲಿಕ್​​ ಹೊಸ ಬಾಂಬ್​ ಸಿಡಿಸಿದ್ದಾರೆ. ದೇವೇಂದ್ರ ಫಡ್ನವಿಸ್​ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ಸಾಕಷ್ಟು ಅಪರಾಧಗಳನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ನೋಟು ಅಮಾನ್ಯೀಕರಣಗೊಂಡ ಬಳಿಕ ಕಂದಾಯ ಇಲಾಖೆ ಬಿಕೆಸಿ ಮೇಲೆ ದಾಳಿ ನಡೆಸಿ 14.56 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿತ್ತು. ಆದರೆ ಆಗ ಮಹಾರಾಷ್ಟ್ರ ಸಿಎಂ ಆಗಿದ್ದ ಫಡ್ನವಿಸ್​ ತಮ್ಮ ಪ್ರಭಾವವನ್ನು ಬಳಸಿ ಈ ಪ್ರಕರಣ ಮುಚ್ಚಿ ಹಾಕಿದ್ರು ಎಂದು ಆರೋಪಿಸಿದ್ರು.

ಸಮೀರ್​ ವಾಂಖೆಡೆ ಹಾಗೂ ದೇವೇಂದ್ರ ಫಡ್ನವಿಸ್​ ನಡುವಿನ ಸ್ನೇಹದಿಂದಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಸಾಕಷ್ಟು ಅಪರಾಧ ಚಟುವಟಿಕೆಗಳು ಮುಚ್ಚಿ ಹೋಗಿವೆ ಎಂದು ಆರೋಪಿಸಿದ್ರು.

ಅಲ್ಲದೇ ಐಆರ್​ಎಸ್​ ಅಧಿಕಾರಿ ಸಮೀರ್​ ವಾಂಖೆಡೆ ಅದು ಹೇಗೆ ಕಳೆದ 14 ವರ್ಷಗಳಿಂದ ಮುಂಬೈನಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ರು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್​ನ ಸದಸ್ಯನಾಗಿದ್ದ ರಿಯಾಜ್​ ಭಾಟಿ ವಿಮಾನ ನಿಲ್ದಾಣದಲ್ಲಿ ಡಬಲ್​ ಪಾಸ್​ಪೋರ್ಟ್​ ಹೊಂದಿದ ಕಾರಣಕ್ಕೆ ಸಿಕ್ಕಿಬಿದ್ದಿದ್ದನು. ಆದರೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಭಾಟಿ, ದೇವೇಂದ್ರ ಫಡ್ನವಿಸ್​ ಜೊತೆ ಸಾಕಷ್ಟು ಫೊಟೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಹಾಜರಿದ್ದ ಕಾರ್ಯಕ್ರಮಗಳಲ್ಲೂ ಭಾಟಿ ಕಾಣಿಸಿಕೊಂಡಿದ್ದ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...