alex Certify BIG NEWS: ಬಾಲಕನನ್ನು ಪುಸಲಾಯಿಸಿ ಬೆತ್ತಲೆ ಪೂಜೆ; ವಿಡಿಯೋ ಮಾಡಿ ವಿಕೃತಿ ಮೆರೆದ ಕಿರಾತಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಾಲಕನನ್ನು ಪುಸಲಾಯಿಸಿ ಬೆತ್ತಲೆ ಪೂಜೆ; ವಿಡಿಯೋ ಮಾಡಿ ವಿಕೃತಿ ಮೆರೆದ ಕಿರಾತಕರು

ಹುಬ್ಬಳ್ಳಿ: ಬೆತ್ತಲೆ ಪೂಜೆ ಮಾಡಿದರೆ ಸಾಲ ತೀರುತ್ತದೆ ಎಂದು ಬಾಲಕನನ್ನು ನಂಬಿಸಿದ ಕಿರಾತಕರು ಬೆತ್ತಲೆ ಪೂಜೆ ಮಾಡಿ ವಿಕೃತಿ ಮೆರೆದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಕೊಪ್ಪಳದ ಹಾಸಗಲ್ ಮೂಲದ ಅಪ್ರಾಪ್ತ ಬಾಲಕ ತಂದೆ ಮಾಡಿದ ಸಾಲ ತೀರಿಸಲು ಕೆಲಸಕ್ಕೆಂದು ಹುಬ್ಬಳ್ಳಿಗೆ ಬಂದಿದ್ದಾನೆ. ಅಮಾಯಕ ಬಾಲಕ ದುರುಳರ ಕೈಗೆ ಸಿಕ್ಕಿದ್ದು, ಬಾಲಕನನ್ನು ಪುಸಲಾಯಿಸಿ ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದು ಕರೆದೊಯ್ದು ಬಾಲಕನಿಗೆ ಬೆತ್ತಲೆ ಪೂಜೆ ಮಾಡಿದರೆ ಸಾಲ ತೀರುತ್ತದೆ ಎಂದು ಹೇಳಿದ್ದಾರೆ.

ಶರಣಪ್ಪ, ಮರಿಗೌಡ, ಶರಣಪ್ಪ ತಳವರ್ ಎಂಬ ಮೂವರು ಆರೋಪಿಗಳು ಬಾಲಕನಿಗೆ ಬೆತ್ತಲೆ ಪೂಜೆ ಮಾಡಿಸಿ ವಿಕೃತಿ ಮೆರೆದಿದ್ದಾರೆ ಎನ್ನಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕೊಪ್ಪಳ ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...