alex Certify ತವರಿಗೆ ಬಾಣಂತನಕ್ಕೆ ಹೋಗಿ ದಾರಿ ತಪ್ಪಿದ ಪತ್ನಿಯಿಂದ ಘೋರ ಕೃತ್ಯ, ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತವರಿಗೆ ಬಾಣಂತನಕ್ಕೆ ಹೋಗಿ ದಾರಿ ತಪ್ಪಿದ ಪತ್ನಿಯಿಂದ ಘೋರ ಕೃತ್ಯ, ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ

ಮೈಸೂರು: ಮೈಸೂರು ಜಿಲ್ಲೆ ಬನ್ನೂರು ಠಾಣೆ ಪೊಲೀಸರು ಕೊಲೆ ರಹಸ್ಯವೊಂದನ್ನು ಬಯಲಿಗೆಳೆದಿದ್ದಾರೆ. ಪತ್ನಿಯೇ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಗಂಡನ ಕೊಲೆ ಮಾಡಿ ಕತೆಕಟ್ಟಿದ್ದ ಪತ್ನಿಯ ಬಣ್ಣ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ವೆಂಕಟರಾಜು ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಆತನ ಪತ್ನಿ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. 10 ವರ್ಷಗಳ ಹಿಂದೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬಳ್ಳೆಕೆರೆ ಗ್ರಾಮದ ಮಹಿಳೆಯನ್ನು ವೆಂಕಟರಾಜು ಮದುವೆಯಾಗಿದ್ದು ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ.

ಪತ್ನಿಯ ಸಹೋದರರೊಂದಿಗೆ ವೆಂಕಟರಾಜು ಜಗಳವಾಡಿದ್ದು, ಆಕೆಯ ತವರು ಮನೆಗೆ ಹೋಗುತ್ತಿರಲಿಲ್ಲ. ಎರಡನೇ ಮಗುವಿನ ಬಾಣಂತನಕ್ಕೆ ಹೋಗಿದ್ದ ಪತ್ನಿ ಪಕ್ಕದ ಮನೆಯ ನಿವಾಸಿ ಅವಿನಾಶ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಗಂಡನ ಮನೆಗೆ ತೆರಳದೇ ತವರು ಮನೆಯಲ್ಲಿ ಉಳಿದುಕೊಂಡಿದ್ದ ಆಕೆ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 9 ರಂದು ತನ್ನ ಗಂಡನನ್ನು ಹುಣಸಗಳ್ಳಿ ಗ್ರಾಮದ ಅಜ್ಜಿ ಮನೆಗೆ ಕರೆಸಿಕೊಂಡು ನಿದ್ದೆ ಮಾತ್ರೆ ಹಾಕಿಕೊಟ್ಟಿದ್ದು, ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಗಂಡನ ಕಡೆಯವರಿಗೆ ಅನುಮಾನ ಬರದಿರಲೆಂದು ಸ್ವಾಭಾವಿಕ ಸಾವು ಎನ್ನುವಂತೆ ಬಿಂಬಿಸಲಾಗಿದೆ. ವೆಂಕಟರಾಜುಗೆ ತಲೆಸುತ್ತು ಬಂದಿದೆ ಎಂದು ಆತನ ಸಹೋದರರಿಗೆ ಹೇಳಿ ನಂತರ ಕೆಲವು ಗಂಟೆಗಳಲ್ಲಿ ವೆಂಕಟರಾಜು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಅವರ ಸಹೋದರರು ಅನುಮಾನಗೊಂಡು ಬನ್ನೂರು ಠಾಣೆ ಪೊಲೀಸರಿಗೆ 2020ರ ಅಕ್ಟೋಬರ್ 10ರಂದು ದೂರು ನೀಡಿದ್ದು, ನಿರಂತರ ತನಿಖೆ ಕೈಗೊಂಡ ಪೊಲೀಸರು ವೈದ್ಯಕೀಯ ಪರೀಕ್ಷೆ ಮತ್ತು ಇತರೆ ಮಾಹಿತಿಯನ್ನು ಕಲೆಹಾಕಿ ಮೃತನ ಪತ್ನಿಯನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...