alex Certify ಹಂದಿ ಅಣ್ಣಿ ಹತ್ಯೆ ಬೆನ್ನಲ್ಲೇ ಮತ್ತೊಂದು ಬರ್ಬರ ಹತ್ಯೆಗೆ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಂದಿ ಅಣ್ಣಿ ಹತ್ಯೆ ಬೆನ್ನಲ್ಲೇ ಮತ್ತೊಂದು ಬರ್ಬರ ಹತ್ಯೆಗೆ ಪ್ಲಾನ್

ಶಿವಮೊಗ್ಗ: ರೌಡಿಶೀಟರ್ ಹಂದಿ ಅಣ್ಣಿ ಹತ್ಯೆಯ ಬೆನ್ನಲ್ಲೇ ಮತ್ತೊಂದು ಬರ್ಬರ ಹತ್ಯೆಗೆ ಶಿವಮೊಗ್ಗದಲ್ಲಿ ಸಂಚು ರೂಪಿಸಿದ್ದು, ಪೊಲೀಸರ ಸಕಾಲಿಕ ಕ್ರಮದಿಂದ ಇಬ್ಬರನ್ನು ಬಂಧಿಸಲಾಗಿದೆ.

ರೌಡಿಶೀಟರ್ ಬಂಕ್ ಬಾಲು ಕೊಲೆ ಪ್ರಕರಣದ ಆರೋಪಿ ಅಂಬು ಅನಿಲ್ ನನ್ನು ಕೊಲೆ ಮಾಡಲು ಸಿದ್ಧತೆ ನಡೆಸಿದ್ದ ಇಬ್ಬರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ತನಿಖೆಗಾಗಿ ವಿಘ್ನೇಶ್ ಎಂಬುವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆಗೆ ಸಂಚು ರೂಪಿಸಿರುವುದು ಗೊತ್ತಾಗಿದೆ.

ರೌಡಿಶೀಟರ್ ಬಂಕ್ ಬಾಲು ಸಹಚರರಾಗಿದ್ದ ವಿಘ್ನೇಶ್ ಮತ್ತು ಆತನ ಸ್ನೇಹಿತ ಚಂದನ್ ಸೇರಿಕೊಂಡು ಅಂಬು ಅನಿಲ್ ಕೊಲೆಗೆ ಸಂಚುರೂಪಿಸಿದ್ದರು. ಈ ಹಿಂದೆ ಬಂಕ್ ಬಾಲುನನ್ನು ಅಂಬು ಅನಿಲ್ ಮತ್ತು ಸಹಚರರು ಕೊಲೆ ಮಾಡಿದ ಆರೋಪವಿದ್ದು, ಅಂಬು ಅನಿಲ್ ನನ್ನು ಕೊಲೆ ಮಾಡುವ ಸಲುವಾಗಿ ವಿಘ್ನೇಶ್ ಮತ್ತು ಚಂದನ್ ಮಾರಕಾಸ್ತ್ರಗಳನ್ನು ಖರೀದಿಸಿ ಕಿರಣಕುಮಾರನ ಮನೆಯಲ್ಲಿ ಇಟ್ಟಿದ್ದರು.

ಕೊಲೆಗೆ ಕಿರಣಕುಮಾರ ಹಣ ಮತ್ತು ವಾಹನದ ವ್ಯವಸ್ಥೆ ಮಾಡುವುದಾಗಿ ಹೇಳಿದ್ದ ಎನ್ನಲಾಗಿದೆ. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಿಘ್ನೇಶ್ ಮತ್ತು ಕಿರಣಕುಮಾರ್ ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಚಂದನ್ ನಾಪತ್ತೆಯಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...