alex Certify ದಾರಿ ತಪ್ಪಿದ ಪತ್ನಿ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ: ಇಬ್ಬರೂ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಪತ್ನಿ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ: ಇಬ್ಬರೂ ಅರೆಸ್ಟ್

ವಿಜಯಪುರ: ಅಕ್ರಮ ಸಂಬಂಧ ಹೊಂದಿದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಬಸವನಬಾಗೇವಾಡಿಯ ಗಣೇಶನಗರ ಬಡಾವಣೆಯಲ್ಲಿ ವಾಸವಾಗಿರುವ ಹೆಗಡಿಹಾಳ ಗ್ರಾಮದ ಜಯಶ್ರೀ ಮತ್ತು ಡೊಂಗ್ರಿಸಾಬ್ ಬಂಧಿತ ಆರೋಪಿಗಳು.

ಅಡುಗೆ ಕೆಲಸ ಮಾಡುತ್ತಿದ್ದ ಡೊಂಗ್ರಿ ಸಾಬ್ ಜತೆ ಜಯಶ್ರೀ ಕೆಲಸಕ್ಕೆ ಹೋಗುತ್ತಿದ್ದು, ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಷಯ ತಿಳಿದ ಜಯಶ್ರೀ ಪತಿ ಜಕರಾಯ ಪತ್ನಿಗೆ ಬುದ್ದಿವಾದ ಹೇಳಿ ಡೊಂಗ್ರಿ ಸಾಬ್ ಸಹವಾಸ ಬಿಡುವಂತೆ ಪತ್ನಿಗೆ ತಾಕೀತು ಮಾಡಿದ್ದಾನೆ.

ಈ ಬಗ್ಗೆ ದಂಪತಿ ನಡುವೆ ಹಲವು ಬಾರಿ ಜಗಳವಾಗಿತ್ತು. ಫೆಬ್ರವರಿ 23ರಂದು ಜಯಶ್ರೀ ಪ್ರಿಯಕರ ಡೊಂಗ್ರಿ ಸಾಬ್ ಜತೆ ಸೇರಿ ಕೊಡಲಿಯಿಂದ ಕೊಚ್ಚಿ ಪತಿ ಜಕರಾಯನನ್ನು ಕೊಲೆ ಮಾಡಿ, ಮೃತ ದೇಹವನ್ನು ಹೊಲವೊಂದರಲ್ಲಿ ಸುಟ್ಟು ಬೂದಿಯನ್ನು ಹಾಳು ಬಾವಿಯಲ್ಲಿ ಎಸೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರವನ್ನು ಕೂಡ ಹಾಳು ಬಾವಿಗೆ ಎಸೆಯಲಾಗಿತ್ತು.

ಸವಾಲಾಗಿದ್ದ ಈ ಪ್ರಕರಣ ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತನ ಪುತ್ರಿ ನೀಡಿದ ಸುಳಿವಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹೆಚ್.ಡಿ. ಆನಂದಕುಮಾರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...