alex Certify ನೆರೆ‌ಮನೆಯವರನ್ನು ರಕ್ಷಿಸಿದ ಮುಂಬೈ ಕಾಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆರೆ‌ಮನೆಯವರನ್ನು ರಕ್ಷಿಸಿದ ಮುಂಬೈ ಕಾಪ್

ಜೀವದಹಂಗು ತೊರೆದು ನೆರೆಮನೆಯವರ ರಕ್ಷಣೆಗೆ ಮುಂದಾದ ಮುಂಬೈ ಪೊಲೀಸ್ ಪೇದೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಟ್ಟಡದ ಮೀಟರ್ ಬಾಕ್ಸ್ ಬೆಂಕಿ ತಗುಲಿದ್ದು ಆಹುತಿಯಾಗಿದೆ. ಅದನ್ನು ಹೆಡ್ ಕಾನ್‌ಸ್ಟೆಬಲ್ ಸಂದೀಪ್ ದಾವ್ರೆ ಗಮನಿಸಿ ನೆರೆಹೊರೆಯವರ ರಕ್ಷಣೆ ಮಾಡಿದರು.

ಈ ಘಟನೆಯನ್ನು ಮುಂಬೈ ನಗರದ ಪೊಲೀಸ್ ಇಲಾಖೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪ್ರಕಟಿಸಿದೆ.

ಕಾನ್ಸ್‌ಟೇಬಲ್ ರಾತ್ರಿ ಪಾಳಿಯ ನಂತರ ರಾತ್ರಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಈ ಘಟನೆ ನಡೆದಿದೆ.

ಬೆಂಕಿ ಬಿದ್ದಿರುವುದು ಗಮನಕ್ಕೆ ಬರುತ್ತಿದ್ದಂತೆ ಬೀಗ ಹಾಕಿದ ತಾರಸಿಯ ಬಾಗಿಲನ್ನು ಹೊಡೆದು ಎಲ್ಲರೂ ಹೊರ ಹೋಗಲು ಮಾರ್ಗದರ್ಶನ ನೀಡಿದರು, ಅಗ್ನಿಶಾಮಕ ದಳವು ಬರುವವರೆಗೂ ಬೆಂಕಿಯನ್ನು ಆರಿಸಲು ಸ್ವತಃ ನಿರ್ವಹಿಸಿದರು. ಅವರ ಸಕಾಲಿಕ‌ ಪ್ರವೇಶದಿಂದ ಯಾವುದೇ ಪ್ರಾಣಹಾನಿಯಾಗಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...