alex Certify ಸಚಿವ ಎಂಟಿಬಿ ನಾಗರಾಜ್, ಶಾಸಕ ಶರತ್ ನಡುವೆ ಮುಂದುವರೆದ ವಾಕ್ಸಮರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವ ಎಂಟಿಬಿ ನಾಗರಾಜ್, ಶಾಸಕ ಶರತ್ ನಡುವೆ ಮುಂದುವರೆದ ವಾಕ್ಸಮರ

ಬೆಂಗಳೂರು: ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡರ ನಡುವೆ ವಾಕ್ಸಮರ ಮುಂದುವರೆದಿದೆ. ಪಂಚಾಯಿತಿ ಕಟ್ಟಡ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂಟಿಬಿ ನಾಗರಾಜ್, ಉದ್ಘಾಟನೆ ಕಾರ್ಯಕ್ರಮಕ್ಕೆ ಸಚಿವರಾದ ಈಶ್ವರಪ್ಪ ಮತ್ತು ಸುಧಾಕರ್ ಅವರು ಬರಬೇಕಿತ್ತು. ಆದರೆ ಅವರು ಬಾರದ ಕಾರಣ ನಾನು ಸರ್ಕಾರದ ಪರವಾಗಿ ಉದ್ಘಾಟನೆಗೆ ತೆರಳಿದ್ದೆ. ಆದರೆ, ಶರತ್ ಬಚ್ಚೇಗೌಡ ಪ್ರೋಟೋಕಾಲ್ ಮರೆತು ಅವರೇ ಉದ್ಘಾಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅನೇಕ ಕಾಮಗಾರಿಗಳನ್ನು ಅವರೇ ಪ್ರೋಟೋಕಾಲ್ ಉಲ್ಲಂಘಿಸಿ ಉದ್ಘಾಟನೆ ಮಾಡುತ್ತಾರೆ. ನಾವು ಕಾರ್ಯಕ್ರಮ ಮಾಡಿದ್ದಾರೆ ಪ್ರೋಟೋಕಾಲ್ ಎಂದು ಹೇಳುವ ಶಾಸಕರಿಗೆ ಪ್ರೋಟೋಕಾಲ್ ಅನ್ವಯವಾಗುವುದಿಲ್ಲವೇ? ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಗೌರವದಿಂದಲೇ ಸಚಿವರನ್ನು ಮಾತನಾಡಿಸಿದ್ದೇನೆ. ಆಹ್ವಾನ ಪತ್ರಿಕೆಯ ಅನುಸಾರ ಕಾರ್ಯಕ್ರಮ ನಡೆಸಲಾಗಿದೆ. ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಮಾತನಾಡುವವರು ಎಲ್ಲವನ್ನೂ ಮಹಾರಾಜರೇ ಮಾಡಲಿ ಅಂದರೆ ಆಗಲ್ಲ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...