alex Certify ಗಂಡನ ಬಗ್ಗೆ ಅತೃಪ್ತಿ ಹೊಂದಿ ಮನೆ ಬಿಟ್ಟ ಮಹಿಳೆಗೆ ತಂದೆ, ಸಹೋದರರಿಂದ ಚಿತ್ರಹಿಂಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡನ ಬಗ್ಗೆ ಅತೃಪ್ತಿ ಹೊಂದಿ ಮನೆ ಬಿಟ್ಟ ಮಹಿಳೆಗೆ ತಂದೆ, ಸಹೋದರರಿಂದ ಚಿತ್ರಹಿಂಸೆ

ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ ತಂದೆ ಮತ್ತು ಸಹೋದರರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯನ್ನು ಮರಕ್ಕೆ ನೇತು ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮಹಿಳೆ ಗಂಡನ ಮನೆಯಿಂದ ಓಡಿ ಹೋಗಲು ಪ್ರಯತ್ನಿಸಿದ್ದಕ್ಕಾಗಿ ಇಂತಹ ಕೃತ್ಯ ಎಸಗಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಬೆಳಕಿಗೆ ಬಂದಿದೆ.

ಅಲಿರಾಜ್‌ಪುರ ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿ ನಾಲ್ವರನ್ನು ಬಂಧಿಸಿದ್ದಾರೆ. ಜೂನ್ 28 ರಂದು ಬೇಡೆ ಪೂಲ್ ತಲಾವ್ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಅಲಿರಾಜ್‌ಪುರ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭಾಗವವಿ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸಂತ್ರಸ್ತೆ ಹತ್ತಿರದ ಹಳ್ಳಿಯ ವ್ಯಕ್ತಿಯನ್ನು ಮದುವೆಯಾಗಿದ್ದು, ಪತಿ ಕೆಲಸಕ್ಕಾಗಿ ಗುಜರಾತಿಗೆ ಹೋಗಿದ್ದಾನೆ. ಗಂಡನ ಬಗ್ಗೆ ಅತೃಪ್ತಿ ಹೊಂದಿದ್ದ ಮಹಿಳೆ ಗಂಡನ ಮನೆಯನ್ನು ಬಿಟ್ಟು ಮಾವನ ಮನೆಗೆ ಹೋಗಿದ್ದಳು.

ಗಂಡನ ಮನೆಯನ್ನು ತೊರೆದ ಮಹಿಳೆಯ ಬಗ್ಗೆ ಕೋಪಗೊಂಡ ಆಕೆಯ ತಂದೆ ಮತ್ತು ಸಹೋದರರು ಕ್ರೂರವಾಗಿ ಥಳಿಸಿದ್ದಾರೆ. ಸ್ಥಳೀಯ ವ್ಯಕತಿಯೊಬ್ಬನ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿ ಪೊಲೀಸರ ಗಮನಕ್ಕೆ ಬಂದಿದೆ. ಜುಲೈ 1 ರಂದೇ ಎಫ್ಐಆರ್ ದಾಖಲಿಸಿ ನಾಲ್ವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ವಿಜಯ್ ಭಾಗವವಿ ತಿಳಿಸಿದ್ದಾರೆ.

ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ ತಂದೆ ಮತ್ತು ಸಹೋದರರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯನ್ನು ಮರಕ್ಕೆ ನೇತು ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮಹಿಳೆ ಗಂಡನ ಮನೆಯಿಂದ ಓಡಿ ಹೋಗಲು ಪ್ರಯತ್ನಿಸಿದ್ದಕ್ಕಾಗಿ ಇಂತಹ ಕೃತ್ಯ ಎಸಗಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಬೆಳಕಿಗೆ ಬಂದಿದೆ.

ಅಲಿರಾಜ್‌ಪುರ ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿ ನಾಲ್ವರನ್ನು ಬಂಧಿಸಿದ್ದಾರೆ. ಜೂನ್ 28 ರಂದು ಬೇಡೆ ಪೂಲ್ ತಲಾವ್ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಅಲಿರಾಜ್‌ಪುರ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭಾಗವವಿ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸಂತ್ರಸ್ತೆ ಹತ್ತಿರದ ಹಳ್ಳಿಯ ವ್ಯಕ್ತಿಯನ್ನು ಮದುವೆಯಾಗಿದ್ದು, ಪತಿ ಕೆಲಸಕ್ಕಾಗಿ ಗುಜರಾತಿಗೆ ಹೋಗಿದ್ದಾನೆ. ಗಂಡನ ಬಗ್ಗೆ ಅತೃಪ್ತಿ ಹೊಂದಿದ್ದ ಮಹಿಳೆ ಗಂಡನ ಮನೆಯನ್ನು ಬಿಟ್ಟು ಮಾವನ ಮನೆಗೆ ಹೋಗಿದ್ದಳು.

ಗಂಡನ ಮನೆಯನ್ನು ತೊರೆದ ಮಹಿಳೆಯ ಬಗ್ಗೆ ಕೋಪಗೊಂಡ ಆಕೆಯ ತಂದೆ ಮತ್ತು ಸಹೋದರರು ಕ್ರೂರವಾಗಿ ಥಳಿಸಿದ್ದಾರೆ. ಸ್ಥಳೀಯ ವ್ಯಕತಿಯೊಬ್ಬನ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿ ಪೊಲೀಸರ ಗಮನಕ್ಕೆ ಬಂದಿದೆ. ಜುಲೈ 1 ರಂದೇ ಎಫ್ಐಆರ್ ದಾಖಲಿಸಿ ನಾಲ್ವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ವಿಜಯ್ ಭಾಗವವಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...