alex Certify ಮಟನ್ ಚೀಲ ಕದ್ದೊಯ್ದ ನಾಯಿಯನ್ನು ಅಟ್ಟಾಡಿಸಿ ಕೊಂದ ವ್ಯಕ್ತಿ ವಿರುದ್ಧ FIR | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಟನ್ ಚೀಲ ಕದ್ದೊಯ್ದ ನಾಯಿಯನ್ನು ಅಟ್ಟಾಡಿಸಿ ಕೊಂದ ವ್ಯಕ್ತಿ ವಿರುದ್ಧ FIR

ಮಟನ್ ಇದ್ದ ಬ್ಯಾಗ್‌ಅನ್ನು ಕದ್ದು ಓಡಿಹೋಯಿತು ಎಂಬ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬ ನಾಯಿ ಒಂದನ್ನು ಹೊಡೆದು ಸಾಯಿಸಿದ ಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಜರುಗಿದೆ.

ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್‌ (40) ಹೆಸರಿನ ಈ ವ್ಯಕ್ತಿ ಭಾನುವಾರದ ಬಾಡೂಟಕ್ಕೆಂದು ತನ್ನ ಮನೆಗೆ ಮಟನ್ ತಂದಿದ್ದರು. ಈ ವೇಳೆ ಮಟನ್ ಇದ್ದ ಕವರ್‌ಅನ್ನು ಕಸಿದು ನಾಯಿಯೊಂದು ಅಲ್ಲಿಂದ ಓಡಿ ಹೋಗಿದೆ. ಈ ಸಿಟ್ಟಿನಲ್ಲಿ ನಾಯಿಯನ್ನು ಅಟ್ಟಿಸಿಕೊಂಡು ಹೋದ ಜಗದೀಶ್‌ ಅದನ್ನು ಕೋಲಿನಿಂದ ಹೊಡೆದು ಸಾಯಿಸಿದ್ದಾನೆ ಎಂದು ಇಲ್ಲಿನ ವಿಜಯ ನಗರ ಪೊಲೀಸ್ ಠಾಣಾಧಿಕಾರಿ ತೆಹಜ಼ೀಬ್ ಕಾಜ಼ಿ ತಿಳಿಸಿದ್ದಾರೆ.

ಜಗದೀಶ್‌ ವಿರುದ್ಧ ಐಪಿಸಿಯಲ್ಲಿ ಪ್ರಾಣಿಗಳ ವಿರುದ್ಧ ಹಿಂಸಾಚಾರ ತೋರಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇಂದೋರ್‌ನ ಪೀಪಲ್ ಫಾರ್‌ ಅನಿಮಲ್ಸ್‌ ಸಂಘಟನೆ ಅಧ್ಯಕ್ಷ ಪ್ರಿಯಾಂಶು ಜೈನ್ ಜಗದೀಶ್ ವಿರುದ್ಧ ದೂರು ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...