alex Certify ಮುಂಗಾರು ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ಮುಂದಿನ 2-3 ದಿನಗಳಲ್ಲಿ ಕೇರಳಕ್ಕೆ ಮಾನ್ಸೂನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಗಾರು ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ಮುಂದಿನ 2-3 ದಿನಗಳಲ್ಲಿ ಕೇರಳಕ್ಕೆ ಮಾನ್ಸೂನ್

ನವದೆಹಲಿ: ನೈಋತ್ಯ ಮಾನ್ಸೂನ್ ಮುಂದಿನ ಎರಡು ಮೂರು ದಿನಗಳಲ್ಲಿ ಕೇರಳವನ್ನು ತಲುಪುವ ನಿರೀಕ್ಷೆಯಿದೆ. ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿಯಾಗಿರುವ ಮಾನ್ಸೂನ್ ಬೇಗನೆ ಆಗಮಿಸುವ ಬಗ್ಗೆ ಹವಾಮಾನ ಇಲಾಖೆ ಮೊದಲೇ ಹೇಳಿತ್ತು.

15 ದಿನಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ಉಂಟಾದ ಅಸಾನಿ ಚಂಡಮಾರುತದ ಪರಿಣಾಮ ಕೇರಳಕ್ಕೆ ಮುಂಗಾರು ಬೇಗನೆ ಪ್ರವೇಶಿಸುವುದಾಗಿ ಹೇಳಲಾಗಿತ್ತು. ಆದರೆ, ಮುನ್ಸೂಚನೆಗಿಂತ 4 ದಿನ ವಿಳಂಬವಾಗಿ ಮುಂಗಾರು ಆಗಮನವಾಗಲಿದೆ. ಕೇರಳದ ಮೇಲೆ ಆರಂಭಿಕ ಆಕ್ರಮಣ ಮತ್ತು ಉತ್ತರದ ಕಡೆಗೆ ತ್ವರಿತ ಪ್ರಗತಿಯ ಮುನ್ಸೂಚನೆಯನ್ನು ಹಾಳು ಮಾಡಿದೆ ಎಂದು IMD ಹೇಳಿದೆ.

ಇತ್ತೀಚಿನ ಹವಾಮಾನ ಸೂಚನೆಗಳ ಪ್ರಕಾರ, ದಕ್ಷಿಣ ಅರೇಬಿಯನ್ ಸಮುದ್ರದ ಮೇಲಿನ ಕೆಳಗಿನ ಮಟ್ಟದಲ್ಲಿ ಪಶ್ಚಿಮ ಮಾರುತಗಳು ಬಲಗೊಂಡಿವೆ. ಉಪಗ್ರಹ ಚಿತ್ರಗಳ ಪ್ರಕಾರ, ಕೇರಳ ಕರಾವಳಿ ಮತ್ತು ಪಕ್ಕದ ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಮೋಡ ಕವಿದ ವಾತಾವರಣ ಹೆಚ್ಚಿದೆ. ಹೀಗಾಗಿ, ಮುಂದಿನ 2-3 ದಿನಗಳಲ್ಲಿ ಕೇರಳದ ಮೇಲೆ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗುತ್ತಿವೆ ಎಂದು IMD ಹೇಳಿದೆ.

ಮೇ 16 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಪ್ರಾರಂಭವಾಗಲಿದೆ ಎಂದು IMD ಹಿಂದೆ ಘೋಷಿಸಿತ್ತು. ಮುಂಗಾರು ಈಗ ಕೇರಳದ ಅಕ್ಷಾಂಶವನ್ನು ತಲುಪಿದೆ. ಮೇ 30 ಮತ್ತು ಜೂನ್ 2 ರ ನಡುವೆ ಮುಂಗಾರು ಮಳೆ ತೀವ್ರಗೊಳ್ಳಬಹುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...