ನಾನು ಪ್ರಧಾನಿಯವ್ರನ್ನ ಭೇಟಿಯಾದಾಗ ನನಗೂ ಮತ್ತು ಅವರಿಗೂ ಜಗಳವಾಯಿತೆಂದು ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಹರಿಯಾಣದ ಚಕ್ರಿದಾದ್ರಿ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜ್ಯಪಾಲ ಮಲಿಕ್ ರವರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ನೆರೆದಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮಲಿಕ್, ಪ್ರಧಾನಿಯನ್ನ ಅಹಂಕಾರಿ ಎಂದು ಕರೆದಿದ್ದಾರೆ. ನಾನು ರೈತರ ಪ್ರತಿಭಟನೆ ಕುರಿತು ಪ್ರಧಾನಿಯವರನ್ನ ಭೇಟಿಯಾಗಿ ಮಾತನಾಡಲು ತೆರಳಿದ್ದೆ. ಭೇಟಿಯಾದ ಐದೇ ನಿಮಿಷಕ್ಕೆ ನಮ್ಮಿಬ್ಬರ ನಡುವೆ ಜಗಳವಾಯಿತು. ಪ್ರಧಾನಿ ಮೋದಿ ಸೊಕ್ಕಿನ ಮನುಷ್ಯ, ನಾನು ಅವರಿಗೆ ನಮ್ಮ ಐನೂರು ರೈತರು ಸತ್ತಿದ್ದಾರೆ ಎಂದಾಗ ನನಗಾಗಿ ಸಾವನ್ನಪ್ಪಿದ್ದಾರಾ ಎಂದು ಕೇಳಿದರು. ಇದಕ್ಕೆ ನಾನು ನೀವು ನಡೆಸುತ್ತಿರುವ ರಾಜಾಡಳಿತದಿಂದ ಸತ್ತಿದ್ದಾರೆ ಎಂದೆ. ನಂತರ ನಮ್ಮ ನಡುವೆ ವಾಗ್ವಾದ ನಡೆಯಿತು, ಆಗ ಅವರು ನೀವು ಅಮಿತ್ ಶಾ ಜೊತೆ ಮಾತನಾಡಿ ಎಂದರು ಎಂದು ಸತ್ಯಪಾಲ್ ಹೇಳಿದ್ದಾರೆ.
ಕಾರ್ಯಕರ್ತರಿಗಾಗಿ ಬಿಜೆಪಿಯಿಂದ ದೇಣಿಗೆ ಸಂಗ್ರಹ ಅಭಿಯಾನ – 1 ಸಾವಿರ ರೂ. ನೀಡಿದ ಪ್ರಧಾನಿ ಮೋದಿ
ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸತ್ಯಪಾಲ್ ಅವರು, ಕೇಂದ್ರ ಸರ್ಕಾರ ಬಿಲ್ ವಾಪಸ್ಸು ಪಡೆದಿದೆ. ಆದರೆ ರೈತರಿಗೆ ನ್ಯಾಯ ದೊರೆತಿಲ್ಲ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವು ರೈತರ ಮೇಲಿನ ಮೊಕದ್ದಮೆಗಳನ್ನ ಇನ್ನು ಹಿಂಪಡೆದಿಲ್ಲ. ರೈತರ ಉದ್ಧಾರಕ್ಕಾಗಿ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಇದು ಸರ್ಕಾರದ ಜವಾಬ್ದಾರಿ. ಒಂದು ವೇಳೆ ಕೇಂದ್ರದಿಂದ ರೈತರಿಗೆ ಅನ್ಯಾಯವಾದರೆ, ರೈತರ ಕಿಚ್ಚು ಮತ್ತೆ ಉಗ್ರ ರೂಪಕ್ಕೆ ತಿರುಗುತ್ತದೆ ಎಂದು ಹೇಳಿದ್ದಾರೆ.