alex Certify ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿ ಬಂದಿದ್ದರೂ ಎಚ್ಚರಿಕೆಯಿಂದಿರಲು ತಜ್ಞರ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿ ಬಂದಿದ್ದರೂ ಎಚ್ಚರಿಕೆಯಿಂದಿರಲು ತಜ್ಞರ ಸಲಹೆ

ಕೋವಿಡ್ ಸೋಂಕಿಗೆ ದೇಶದ ಬಹುತೇಕ ಜನರು ರೋಗ ನಿರೋಧಕ ಶಕ್ತಿಯನ್ನು ಅದಾಗಲೇ ಬೆಳೆಸಿಕೊಂಡಿದ್ದರೂ ಸಹ, ಎರಡನೇ ಅಲೆಯಂಥ ಸಂಕಷ್ಟ ಕಾಲವನ್ನು ಮುಂದೆ ಎದುರಿಸಲು ಜನರು ಇನ್ನಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ನವದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್ ಐಸಿಯು ನಿರ್ವಹಣೆ ಮಾಡುತ್ತಿರುವ ಡಾ. ಯುದ್ಯವೀರ್‌ ಸಿಂಗ್ ಈ ಬಗ್ಗೆ ಮಾತನಾಡಿ, “ಕೋವಿಡ್ ಪ್ರಕರಣಗಳು ಕಡಿಮೆ ಇರುವಾಗ ಆರ್ಥಿಕ ಚಟುವಟಿಕೆಗಳಿಗೆ ಮರುಚಾಲನೆ ಕೊಡಲು ಕೆಲವೊಂದು ನಿರ್ಬಂಧಗಳನ್ನು ಸಡಿಲಿಸುವುದು ಬಹಳ ಮುಖ್ಯ. ಆದರೆ ಈ ಸಂದರ್ಭದಲ್ಲಿ ಜನರು ಎಚ್ಚರಿಕೆಯನ್ನು ಕಡಿಮೆ ಮಾಡದೇ, ಕೋವಿಡ್-19 ನಿಯಂತ್ರಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಪಾಲನೆ ಮಾಡುವುದು ಮುಖ್ಯವಾಗಿದೆ” ಎಂದು ತಿಳಿಸಿದ್ದಾರೆ.

ನಿಮ್ಮ ಉಗುರು ಸುಂದರವಾಗಿ ಕಾಣಿಸಲು ಹೀಗೆ ಮಾಡಿ

ಆದರೂ ಸಹ ಕೋವಿಡ್ ಎರಡನೇ ಅಲೆಯಂಥ ಪರಿಸ್ಥಿತಿಗಳು ನಮಗೆ ಬಹಳ ದೊಡ್ಡ ಪಾಠವನ್ನೇ ಕಲಿಸಿದ್ದು, ಯಾವುದೇ ಸಂದರ್ಭದಲ್ಲೂ ಸೋಂಕಿನ ಪ್ರಕರಣಗಳು ವಿಪರೀತವಾಗಿಬಿಡುವ ಸಾಧ್ಯತೆ ಇರುವ ಕಾರಣ ಇಂಥ ಪರಿಸ್ಥಿತಿ ಬಾರದಂತೆ ಸಕಲ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಬೇಕೆಂದು ಶ್ರೀ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ವೈದ್ಯೆ ಡಾ. ಪೂಜಾ ಖೋಸ್ಲಾ ತಿಳಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...