alex Certify ಉರಿಯುತ್ತಿರುವ ಚಿತೆಗೆ ಹಾರಿ ಪ್ರಾಣ ಬಿಟ್ಟ ಮಾನಸಿಕ ಅಸ್ವಸ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉರಿಯುತ್ತಿರುವ ಚಿತೆಗೆ ಹಾರಿ ಪ್ರಾಣ ಬಿಟ್ಟ ಮಾನಸಿಕ ಅಸ್ವಸ್ಥ

ಹೊತ್ತಿ ಉರಿಯುತ್ತಿರುವ ಚಿತೆಗೆ ಧುಮುಕಿದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ಸೋಲು ಕಂಡ ಘಟನೆ ಗುಜರಾತ್‌ನ ವಡೋದರಾದ ಹೊರವಲಯದ ದಶ್ರಥ್‌ ಗ್ರಾಮದಲ್ಲಿ ಜರುಗಿದೆ.

ಪೂನಮ್ ಸೋಲಂಕಿ ಎಂದು ಗುರುತಿಸಲಾದ ಈ ವ್ಯಕ್ತಿ, ಚಿತೆಗೆ ಹಾರಿದ ಪರಿಣಾಮ ಮೈಯೆಲ್ಲಾ ಸುಟ್ಟ ಗಾಯಗಳನ್ನು ಮಾಡಿಕೊಂಡಿದ್ದು, ವೈದ್ಯರಿಗೆ ಈತನನ್ನು ಉಳಿಸಲು ಸಾಧ್ಯವಾಗಿಲ್ಲ.

ಇಲ್ಲಿನ ಛ್ಛಾನಿ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲಿಕಾ ದೋಷವಿರುವ ಈ ವ್ಯಕ್ತಿ, ತನ್ನೂರಿನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಅಂತಿಮ ಸಂಸ್ಕಾರ ನೆರವೇರಿಸುತ್ತಿದ್ದ ವೇಳೆ ಬಂದು ಚಿತೆಗೆ ಹಾರಿಬಿಟ್ಟಿದ್ದಾನೆ. ಆತನ ಕೂಗಾಟವನ್ನು ಕೇಳಿದ ಗ್ರಾಮಸ್ಥರು ಆತನ ರಕ್ಷಣೆಗೆ ಓಡಿ ಬಂದಿದ್ದಾರೆ.

ಚಿತೆಯಿಂದ ಆತನ ದೇಹವನ್ನು ಹೊರಗೆ ಎಳೆಯುವಷ್ಟರಲ್ಲಿ ಆತನ ಪರಿಸ್ಥಿತಿ ಚಿಂತಾಜನಕವಾಗಿಬಿಟ್ಟಿತ್ತು. ಮಾನಸಿಕ ಅಸ್ವಸ್ಥರಾಗಿದ್ದ ಪೂನಂರನ್ನು ಆತನ ತಾಯಿ ನೋಡಿಕೊಳ್ಳುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...