alex Certify ಹಂದಿಗಳ ಕುರಿತ ಜಗಳ ಓರ್ವನ ಸಾವಿನಲ್ಲಿ ಅಂತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಂದಿಗಳ ಕುರಿತ ಜಗಳ ಓರ್ವನ ಸಾವಿನಲ್ಲಿ ಅಂತ್ಯ

ದೆಹಲಿ: ಹಂದಿಗಳನ್ನು ಸಾಕಿದ ವ್ಯಕ್ತಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ಜಿಟಿಬಿ ಎನ್ಕ್ಲೇವ್ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಸೋಮವಾರ ನಸುಕಿನಲ್ಲಿ ಈ ಘಟನೆ ನಡೆದಿದೆ.

ಹಂದಿಗಳನ್ನು ಸಾಕುತ್ತಿರುವ ವಿಷಯಕ್ಕೆ ಒಬ್ಬನನ್ನು ಹತ್ಯೆ ಮಾಡಿದ ವಿಚಾರ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಕ್ಕಿ ಮತ್ತು ರಾಕಿ ಬಂಧಿತರು.

‘ ಆ ರಾತ್ರಿ ಧೋನಿ ಟೀಂ ಇಂಡಿಯಾ ಜೆರ್ಸಿಯಲ್ಲೇ ಮಲಗಿದ್ದರು, ಕಣ್ಣಂಚಲ್ಲಿ ನೀರಿತ್ತು ’ – ಭಾವುಕ ಕ್ಷಣಗಳನ್ನು ನೆನಪಿಸಿಕೊಂಡಿದ್ದ ಆರ್​. ಅಶ್ವಿನ್​

ಸಂದೀಪ್ ಕುಟುಂಬ ಹಂದಿಗಳನ್ನು ಸಾಕುತ್ತಿತ್ತು. ಈ ವಿಚಾರವಾಗಿ ವಿಕ್ಕಿ ಕುಟುಂಬ ಹಾಗೂ ಸಂದೀಪ್ ಕುಟುಂಬದ ನಡುವೆ ಆಗಾಗ ಜಗಳ ನಡೆಯುತ್ತಿತ್ತು. 2020ರ ಏಪ್ರಿಲ್ ನಲ್ಲಿ ಜಗಳ ತಾರಕಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಇದೀಗ ಈ ವಿಚಾರವಾಗಿ ಸಂದೀಪ್ ಕುಟುಂಬದ ಇಬ್ಬರ ಮೇಲೆ ಗುಂಡು ಹಾರಿಸಲಾಗಿದೆ. ವಿಕಾಸ್ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಸುರೇಶ್ ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...