alex Certify BIG NEWS: ವಿಧವೆಗೆ ಬಾಳು ಕೊಡೋದಾಗಿ ಹೇಳಿ ತಾಳಿಕಟ್ಟಿದ ಯೋಧ; ಮತ್ತೊಂದು ಮದುವೆಗೆ ಸಿದ್ಧನಾದ ಭೂಪ; ಮುಹೂರ್ತದ ವೇಳೆ ಮದುವೆ ತಡೆದ ಮೊದಲ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಧವೆಗೆ ಬಾಳು ಕೊಡೋದಾಗಿ ಹೇಳಿ ತಾಳಿಕಟ್ಟಿದ ಯೋಧ; ಮತ್ತೊಂದು ಮದುವೆಗೆ ಸಿದ್ಧನಾದ ಭೂಪ; ಮುಹೂರ್ತದ ವೇಳೆ ಮದುವೆ ತಡೆದ ಮೊದಲ ಪತ್ನಿ

ಹಾಸನ: ವಿಧವೆಗೆ ಬಾಳು ಕೊಡುವುದಾಗಿ ಹೇಳಿ ಆಕೆಯನ್ನು ವಿವಾಹವಾಗಿದ್ದ ಯೋಧ, ಆ ವಿಚಾರ ಮುಚ್ಚಿಟ್ಟು ಬೇರೊಂದು ಯುವತಿಯೊಂದಿಗೆ ಮದುವೆಗೆ ಸಿದ್ಧತೆ ನಡೆಸಿ ತಾಳಿಕಟ್ಟುವ ವೇಳೆ ಮೊದಲ ಪತ್ನಿ ಬಂದು ಮದುವೆ ನಿಲ್ಲಿಸಿದ ಘಟನೆ ಹಾಸನ ಜಿಲ್ಲೆಯ ಭೂವನಹಳ್ಳಿ ಕಲ್ಯಾಣಮಂಟಪದಲ್ಲಿ ನಡೆದಿದೆ.

ಭಾರತೀಯ ಸೇನೆಯಲ್ಲಿ ಸೈನಿಕನಾಗಿರುವ ಕಿರಣ್ ಕುಮಾರ್ ಎಂಬಾತ ವಿಧವೆ ಮಹಿಳೆಗೆ ಬಾಳು ಕೊಡೋದಾಗಿ ಹೇಳಿ ನಂಬಿಸಿ ವಿವಾಹವಾಗಿರುವುದೂ ಅಲ್ಲದೇ ಈಗ ಮತ್ತೊಂದು ಮದುವೆಗೆ ರೆಡಿಯಾಗಿದ್ದ.

ಭುವನಹಳ್ಳಿ ಕಲ್ಯಾಣಮಂಟಪದಲ್ಲಿ ಎರಡನೇ ಮದುವೆ ಸಿದ್ಧತೆ ನಡೆದಿದ್ದು, ಇನ್ನೇನು ವಧುವಿಗೆ ತಾಳಿಕಟ್ಟಬೇಕು ಅನ್ನುವಷ್ಟರಲ್ಲಿ ಮೊದಲ ಪತ್ನಿ ಎಂಟ್ರಿಕೊಟ್ಟಿದ್ದಾಳೆ. ಕಿರಣ್ ಕುಮಾರ್ 6 ತಿಂಗಳ ಹಿಂದೆ ತನ್ನನ್ನು ಮದುವೆಯಾಗಿದ್ದು, ಈಗ ತನಗೆ ಮೋಸ ಮಾಡಿ ಎರಡನೇ ಮದುವೆಯಾಗುತ್ತಿದ್ದಾನೆ ಎಂದು ಮಹಿಳೆ ದೂರಿದ್ದಾಳೆ.

ಕುಟುಂಬದವರು ಹಾಗೂ ಮದುವೆಗೆ ಬಂದಿದ್ದ ಸಂಬಂಧಿಕರಿಗೆ ಶಾಕ್ ಆಗಿದೆ. ಆದರೆ ಕಿರಣ್ ಕುಮಾರ್ ಮಹಿಳೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಿರಣ್ ಕುಮಾರ್ ಸೇರಿದಂತೆ ಕುಟುಂಬದವರನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದ್ದಾರೆ. ವಿಧವೆಗೆ ವಂಚಿಸಿರುವುದು ಬಯಲಾಗಿದೆ. ನವ ವಧುವಿನ ಕುಟುಂಬದವರು ತಮ್ಮ ಮಗಳನ್ನು ಮನೆಗೆ ಕರೆದೊಯ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...