alex Certify ವಿರೋಧದ ನಡುವೆಯೂ ‘ಮಹಿಷ ದಸರಾ’ ಆಹ್ವಾನ ಪತ್ರಿಕೆ ಬಿಡುಗಡೆ: ‘ಮೈಸೂರು ದಸರಾ’ ಉದ್ಘಾಟನೆಯ 2 ದಿನ ಮೊದಲೇ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರೋಧದ ನಡುವೆಯೂ ‘ಮಹಿಷ ದಸರಾ’ ಆಹ್ವಾನ ಪತ್ರಿಕೆ ಬಿಡುಗಡೆ: ‘ಮೈಸೂರು ದಸರಾ’ ಉದ್ಘಾಟನೆಯ 2 ದಿನ ಮೊದಲೇ ಆಚರಣೆ

ಮೈಸೂರು: ವಿರೋಧದ ನಡುವೆಯೂ ಮಹಿಷ ದಸರಾ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 13 ರಂದು ಮಹಿಷ ದಸರಾ ಆಚರಣೆ ಮಾಡಲಾಗುವುದು.

ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಎರಡು ದಿನ ಮೊದಲೇ ಮಹಿಷ ದಸರಾ ಆಚರಿಸಲಾಗುವುದು. ಆಹ್ವಾನ ಪತ್ರಿಕೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಮಹಿಷಬೆಟ್ಟ ಎಂದು ಉಲ್ಲೇಖಿಸಲಾಗಿದೆ. ಮಾಜಿ ಸಚಿವ ಬಿ.ಟಿ. ಲಲಿತಾ ನಾಯಕ್ ಅವರು ಮಹಿಷ ದಸರಾ ಉದ್ಘಾಟಿಸಲಿದ್ದಾರೆ.

ಮಹಿಷ ದಸರಾ ಉದ್ಘಾಟನೆಗೆ ಕೆಲವರು ಆಕ್ಷೇಪಿಸಿದ್ದಾರೆ. ಹಿಂದಿನಿಂದಲೂ ಮಹಿಷ ದಸರಾ ಆಚರಣೆಗೆ ವಿರೋಧವಿದ್ದರೂ, ಅದನ್ನು ಲೆಕ್ಕಿಸದೇ ಮಹಿಷ ದಸರಾ ಆಚರಿಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...