alex Certify ಪ್ರವಾಹದಲ್ಲಿ ಸಿಲುಕಿದ ಮಧ್ಯಪ್ರದೇಶದ ಗೃಹಸಚಿವ: ಕಾಪ್ಟರ್ ಮುಖಾಂತರ ಏರ್ ಲಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಹದಲ್ಲಿ ಸಿಲುಕಿದ ಮಧ್ಯಪ್ರದೇಶದ ಗೃಹಸಚಿವ: ಕಾಪ್ಟರ್ ಮುಖಾಂತರ ಏರ್ ಲಿಫ್ಟ್

ಭೋಪಾಲ್: ಮಧ್ಯಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಗೃಹಸಚಿವ ನರೋತ್ತಮ್ ಮಿಶ್ರಾ ಅವರಿದ್ದ ದೋಣಿಯಲ್ಲಿ ದೋಷವುಂಟಾದ ಕಾರಣ ಅವರನ್ನು ಹೆಲಿಕಾಪ್ಟರ್ ಮುಖಾಂತರ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ.

ಮಧ್ಯಪ್ರದೇಶದ ಹಲವೆಡೆ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮರೂನ್ಡ್ ಗ್ರಾಮದ ಕೆಲವು ಜನರು ಮನೆಯ ಮೇಲ್ಛಾವಣಿಯಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ರಾಜ್ಯ ವಿಪತ್ತು ಪಡೆಯ (ಎಸ್‌ಡಿಆರ್‌ಎಫ್) ದೋಣಿಯಲ್ಲಿ ಅಲ್ಲಿಗೆ ತಲುಪಿದರು. ಈ ವೇಳೆ ಮರವೊಂದು ಇದ್ದಕ್ಕಿದ್ದಂತೆ ದೋಣಿಯ ಮೇಲೆ ಬಿದ್ದಿದೆ. ಕೂಡಲೇ ಸರಕಾರಿ ಅಧಿಕಾರಿಗಳಿಗೆ ಸಚಿವರು ಸಂದೇಶ ರವಾನಿಸಿದ್ದಾರೆ.

ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಕೇಂದ್ರ ಸರ್ಕಾರ ಘೋಷಿಸಿದೆ ಈ ಸೌಲಭ್ಯ

ಸಚಿವರನ್ನು ಹಾಗೂ ಜನರನ್ನು ಐಎಎಫ್ ಹೆಲಿಕಾಪ್ಟರ್ ಮುಖಾಂತರ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಮಿಶ್ರಾ ಹಾಗೂ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲಾಯಿತು.

ಈ ಹಿಂದೆ, ಮಿಶ್ರಾ ಅವರು ದಾಟಿಯಾ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ನೋಡಿಕೊಂಡಿದ್ದರು. ಹಾಗೂ ಸಂತ್ರಸ್ತರಿಗೆ ಪರಿಹಾರ ಶಿಬಿರಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...