alex Certify ಶುಕ್ರವಾರ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಕ್ರವಾರ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ಹಿಂದೂ ಧರ್ಮದಲ್ಲಿ, ಪ್ರತಿಯೊಂದು ದಿನವನ್ನೂ ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಶುಕ್ರವಾರ ತಾಯಿ ಲಕ್ಷ್ಮಿಯ ಆರಾಧನೆ ನಡೆಯುತ್ತದೆ. ಲಕ್ಷ್ಮಿ ದೇವಿಯನ್ನು ಭಕ್ತರು ಪೂಜಿಸಿ, ಜೀವನದಲ್ಲಿ ಸಂತೋಷ ಪಡೆಯುತ್ತಾರೆ. ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಶುಕ್ರವಾರ ಲಕ್ಷ್ಮಿ ಪೂಜೆ ಮಾಡಿದ್ರೆ ಎಲ್ಲ ತೊಂದರೆ ದೂರವಾಗುತ್ತದೆ ಎಂದು ನಂಬಲಾಗಿದೆ. ಆದ್ರೆ ಶುಕ್ರವಾರ ಕೆಲ ಕೆಲಸ ಮಾಡಿದ್ರೆ ಸಮೃದ್ಧಿ, ಸಂಪತ್ತು ಬರುವ ಬದಲು ಹಿನ್ನಡೆಯಾಗುತ್ತದೆ.

ಸಾಲ ನೀಡಬೇಡಿ : ಶುಕ್ರವಾರ, ಸಾಲ ನೀಡಬೇಡಿ. ಶುಕ್ರವಾರ ಯಾರಿಗಾದ್ರೂ ಸಾಲ ನೀಡಿದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ. ಆದ್ದರಿಂದ ಮರೆತೂ ಸಾಲ ನೀಡಬೇಡಿ. ಹಾಗೆ ಸಾಲ ಪಡೆಯಬೇಡಿ.

ಅವಮಾನಿಸಬೇಡಿ: ಶುಕ್ರವಾರ, ಯಾವುದೇ ಮಹಿಳೆ, ಹುಡುಗಿ ಮತ್ತು ನಪುಂಸಕರನ್ನು ಅವಮಾನಿಸಬೇಡಿ. ಯಾರನ್ನೂ ನಿಂದಿಸಬೇಡಿ. ತಾಯಿ ಲಕ್ಷ್ಮಿ, ಮಹಿಳೆಯರಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಹಾಗಾಗಿ ಮಹಿಳೆಯನ್ನು ಅವಮಾನಿಸಬೇಡಿ.

ಮಾಂಸ ತಿನ್ನಬೇಡಿ : ಶುಕ್ರವಾರ ಮಾಂಸ ಮತ್ತು ಮದ್ಯ ಸೇವಿಸಬೇಡಿ. ಈ ದಿನ ಸಂಪೂರ್ಣ ಸಾತ್ವಿಕ ಆಹಾರವನ್ನು ತೆಗೆದುಕೊಳ್ಳಬೇಕು.

ಈ ವಸ್ತುವನ್ನು ದಾನ ಮಾಡಬೇಡಿ : ಶುಕ್ರವಾರ ಯಾರಿಗೂ ಸಕ್ಕರೆ ನೀಡಬಾರದು. ಜ್ಯೋತಿಷ್ಯದ ಪ್ರಕಾರ, ಶುಕ್ರ ಮತ್ತು ಚಂದ್ರ ಇಬ್ಬರಿಗೂ ಸಕ್ಕರೆಯ ಸಂಬಂಧವಿದೆ. ಶುಕ್ರವಾರ ಸಕ್ಕರೆ ನೀಡಿದ್ರೆ ಶುಕ್ರ ದುರ್ಬಲಗೊಳ್ಳುತ್ತಾನೆ.

ಶುಕ್ರವಾರ ಲಕ್ಷ್ಮಿ ದೇವಿಯ ಜೊತೆಗೆ ನಾರಾಯಣನನ್ನು ಕೂಡ ಪೂಜಿಸಬೇಕು. ಲಕ್ಷ್ಮಿದೇವಿಯೊಂದಿಗೆ ನಾರಾಯಣನನ್ನು ಪೂಜಿಸುವುದರಿಂದ ಎಲ್ಲಾ ದೇವತೆಗಳು ಮತ್ತು ದೇವಿಯರು ಸಂತೋಷಗೊಂಡು ಆಶೀರ್ವಾದ ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...