alex Certify ಪುತ್ರಿಯಿಂದ ದೂರ ಇರು ಎಂದು ಹಲ್ಲೆ ಮಾಡಿದ ತಂದೆ: ರೊಚ್ಚಿಗೆದ್ದು ಲವರ್ ತಂದೆಯನ್ನೇ ಹತ್ಯೆಗೈದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರಿಯಿಂದ ದೂರ ಇರು ಎಂದು ಹಲ್ಲೆ ಮಾಡಿದ ತಂದೆ: ರೊಚ್ಚಿಗೆದ್ದು ಲವರ್ ತಂದೆಯನ್ನೇ ಹತ್ಯೆಗೈದ ಯುವಕ

ಬಾಗಲಕೋಟೆ: ಮಗಳಿಂದ ದೂರ ಇರು ಎಂದು ಹೇಳಿದ್ದಕ್ಕೆ ಯುವತಿಯ ತಂದೆಯನ್ನು ಯುವಕ ಹತ್ಯೆ ಮಾಡಿದ್ದಾನೆ. ಸೇಡಿನಿಂದ ಪ್ರಿಯತಮೆಯ ತಂದೆಯನ್ನು ಕೊಲೆ ಮಾಡಿದ ಘಟನೆ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ನಡೆದಿದೆ.

ಮಚ್ಚಿನಿಂದ ಕೊಚ್ಚಿ 52 ವರ್ಷದ ಸಂಗನಗೌಡ ಪಾಟೀಲ್ ಹತ್ಯೆ ಮಾಡಲಾಗಿದೆ. ಅವರ ಪುತ್ರಿಯ ಪ್ರಿಯಕರ ಪ್ರವೀಣ್ ಕಾಂಬಳೆ ಹಲ್ಲೆ ಮಾಡಿದ ಆರೋಪಿ. ಅಂತರ್ಜಾತಿ ಹಿನ್ನೆಲೆಯಲ್ಲಿ ಮಗಳಿಂದ ದೂರ ಇರುವಂತೆ ಹೇಳಿ ಸಂಗನಗೌಡ ಪಾಟೀಲ್ ಕುಟುಂಬದವರು ಪ್ರವೀಣ್ ಕಾಂಬಳೆ ಮೇಲೆ ಹಲ್ಲೆ ಮಾಡಿದ್ದರು. ರೊಚ್ಚಿಗೆದ್ದ ಪ್ರವೀಣ್ ಕಾಂಬಳೆ ಮಚ್ಚಿನಿಂದ ಯುವತಿಯ ತಂದೆಯನ್ನು ಹತ್ಯೆ ಮಾಡಿದ್ದಾನೆ. ಬಾಗಲಕೋಟೆ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...